Tuesday 7 June 2016




ಕನಸಿನ ಕುದುರೆ ಏರಿ ಭಾಗ ೪



ಕನಸಿನ ಮಾತು ನಾವ್ ಕೇಳ್ಬಾರ್ದು ನಮ್ ಮಾತು ಕೇಳೋತರ ಕನಸು ಇರಬೇಕು.. Lets start....




ನಾಗನಿಧಿಯ ಗುಂಗಲ್ಲಿ ಪುಲ್ ಟೈಟ್ ಆಗೋವಷ್ಟು ಕುಡಿದು ಕಾರಲ್ಲಿ ಜೋರಾಗಿ ಹೋಗ್ತಾ ಇದ್ದ ಕೀರ್ತಿ ಎದುರು ಅಚಾನಕ್ ಆಗಿ ವಿಚಿತ್ರ ಘಟನೆಗಳು ನಡೆಯೋಕೆ ಶುರುವಾಯ್ತು.. ಇದ್ದಕ್ಕಿದ್ದಂತೆ ಗಾಳಿ ಮತ್ತು ಸಿಡಿಲು ಏನೋ ವಿಚಿತ್ರವಾದ ಕೂಗು.. ಭಯವಾಗಿ ಇನ್ನೂ ಜೋರಾಗಿ ಕಾರು ಓಡಿಸೋಕೆ ಶುರುಮಾಡ್ದ.. ಕಾರಿನ ಗ್ಲಾಸ್ ಗೆ ಮಂಜು ಕಟ್ಟೋಕೆ ಶುರುವಾಯ್ತು.. ದಾರಿ ಕಾಣದೇ ನೇರ ಪ್ರಪಾತಕ್ಕೆ ಕಾರು ಬಿತ್ತು.. ಅದೃಷ್ಟವಶಾತ್ ಕೀರ್ತಿ ಬಚಾವ್.. ಇದೆಲ್ಲ ಹೇಗಾಯ್ತು ಅನ್ನೋಕೆ ಒಂದು


ಪ್ಲಾಶ್ ಬ್ಯಾಕ್...


ತಂಗಿ ಮಾತನ್ನ ನಂಬಿ ಆಸ್ಪತ್ರೆಯಿಂದ ರಾಜೀವನನ್ನ ಪಲ್ಲವಿಯನ್ನ ಕರೆದುಕೊಂಡು ನ್ಯೂಯಾರ್ಕ್ ಗೆ ಹೊರಡ್ತಾನೆ.. ಕನಕ ಈಗ ಒಂಟಿ.. ನಾಗನಿಧಿಯ ದುರಾಸೆ ಕೀರ್ತಿಯನ್ನ ಆವರಿಸಿಬಿಟ್ಟಿದೆ.. ಅದಕ್ಕಾಗಿ ವಷೀಕರಣ ಮಾಡಿಸಿ ಕನಕಾಳನ್ನ ತನ್ನ ತಾಳಕ್ಕೆ ಕುಣಿಯೋ ಗೊಂಬೆಯನ್ನಾಗಿ ಮಾಡ್ಕೋತಾನೆ.. ಕನಕ ಈಗ ಕೀರ್ತಿಯ ಕೈಗೊಂಬೆ.. ನಾಗ ನಿಧಿ ಪಡೆಯೋಕೆ ಮಹಾ ಶುಕ್ರ ಗ್ರಹಣ ಸಮಯದಲ್ಲಿ ಕನಕಾಳನ್ನ ಮದುವೆಯಾಗಿ ಬಲಿ ಕೊಟ್ಟರೆ ನಾಗದೇವತೆ ವಷೀಕರಣಗೊಂಡು ನಿಧಿಯನ್ನು ಕೊಡುತ್ತಾಳೆ.. ಆದರೆ ಕನಕ ಕನ್ಯೆಯಾಗಿದ್ದರೆ ಮಾತ್ರ.. ಆಕೆ ಕನ್ಯೆ ಅಲ್ಲದಿದ್ದರೆ ಬಲಿಪೀಠದಲ್ಲಿ ಕನಕಾ ಸಾಯಲ್ಲ ಮತ್ತು ಕನಕಾಳನ್ನ ಕೂಡಿದವನಿಗೆ ನಾಗನಿಧಿಯ ಭಾಗ್ಯ ಲಭಿಸುತ್ತೆ... ಆದರೆ ಸಂಜೀವಿನಿ ಬೆಟ್ಟದಿಂದ ಬ್ರಹ್ಮಕಮಲ ತಂದು ಆ ಹೂವಿನ ಮಂಟಪದಲ್ಲಿ ಕನಕಾಳನ್ನ ವರಿಸಬೇಕು ಎಂಬ ಕರಾರಿದೆ.. ಸುಮ್ನೆ ಸಾಯಿಸೋದಕ್ಕಿಂತ ಅನುಭವಿಸೋದೆ ಬೆಟರ್ ಅಂತ ಕೀರ್ತಿ ಹೊರಟಿದ್ದು ಸಂಜೀವಿನಿ ಪರ್ವತಕ್ಕೆ... ಆದರೆ ನಾಗನಿಧಿಯನ್ನ ಕಾಯ್ತಾ ಇರೋದು ಬೃಹತ್ ಗಾತ್ರದ ಗಂಡಬೇರುಂಡ ಪಕ್ಷಿ...


ಗಂಡಭೇರುಂಡ ಬರೋ ರಭಸಕ್ಕೆ ಗಾಳಿ ಜೋರಾಗಿ ಬೀಸೋಕೆ ಶುರುವಾಯ್ತು.‌. ಮೋಡವನ್ನ ರೆಕ್ಕೆಯಿಂದ ತಳ್ಳಿ ಬರೋವಾಗ ಸಿಡಿಲು ಸಿಡಿಯೋಕೆ ಶುರುವಾಯ್ತು.. ಭಯದಿಂದ ಬೆವರಿ ಸೆಕೆ ಅಂತ ಅಂದ್ಕೊಂಡು ac ಜಾಸ್ತಿ ಮಾಡಿದ್ರಿಂದ ಗ್ಲಾಸ್ ಗೆ ಮಂಜು ಕಟ್ಟಿ ರೋಡ್ ಕಾಣಿಸಲಿಲ್ಲ.. ಕಾರು ಪ್ರಪಾತಕ್ಕೆ ಬಿತ್ತು...


ಕೀರ್ತಿ ಅಲ್ಲಿಂದ ಹೇಗೋ ಬದುಕಿ ಬಂದು ಊರು ಸೇರಿಕೊಂಡ.. ಇತ್ತ ನ್ಯೂಯಾರ್ಕ್ ನಲ್ಲಿ ಪಲ್ಲವಿ ಮಿಸ್ಸಿಂಗ್.. ಅದು ಆಕಸ್ಮಿಕ.. ಆದರೆ ರಿಸಲ್ಟ್ ಭಯಂಕರ.. ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿ ಪಲ್ಲವಿ ... ಒಂದು ಕಡೆ ಪ್ರೀತಿ ಇನ್ನೊಂದು ಕಡೆ ತಂಗಿ ಇಬ್ಬರನ್ನ ಕಳೆದುಕೊಂಡ ಕುಮಾರ ಕಣ್ಣೀರ ಸಾಗರದಲ್ಲೆ ಹರಸಾಹಸ ಪಟ್ಟು ರಾಜೀವನನ್ನ ಸರಿಪಡಿಸ್ತಾನೆ.. ರಾಜೀವ ಸರಿಯಾದ ತಕ್ಷಣ ಪಲ್ಲವಿ ಮಿಸ್ಸಿಂಗ್ ಹಿಂದೆ ಯಾರ ಕೈವಾಡ ಇದೆ ಅಂತ ಗೊತ್ತಾಗುತ್ತೆ.. ಆದರೆ ಬಿಡಿಸಿ ಕರೆತರೋದು ಸುಲಭದ ಮಾತಲ್ಲ.. ಆದರೂ ಇಬ್ಬರೂ ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡ್ತಾರೆ..


ಪ್ಲಾನ್ ಪ್ರಕಾರ ಮೊದಲು ಇಂಡಿಯಾ ಗೆ ವಾಪಸ್ ಬರ್ತಾರೆ.. ಮೊದಲು ವಶಿಕರಣದಿಂದ ನರಳುತ್ತಿರೋ ಕನಕಾಳ ರಕ್ಷಣೆ ಮಾಡೋಕೆ ಟ್ರೈ ಮಾಡ್ತಾರೆ.. ಅದರೆ ಆ ಮಂತ್ರವಾದಿ ಮಾಡಿರೋ ವಶೀಕರಣ ಅಷ್ಟು ಸುಲಭಕ್ಕೆ ಬಿಡಿಸುವಂತದಲ್ಲ.. ಅಷ್ಟೆ ಅಲ್ಲ ಬದುಕಿರುವ ರಾಜೀವನ ಮೇಲೂ ವಾಮಾಚಾರದ ಕ್ರೂರ ಶಕ್ತಿಯಾದ ಶಖೋಚಿ ವಿದ್ಯೆ ಪ್ರಯೋಗ ಮಾಡ್ತಾರೆ.. ಶಖೋಚಿ ಕ್ರೂರಿ ಪ್ರತೀ ದಿನ ರಕ್ತ ಕುಡಿಯುತ್ತೆ .‌. ಅಂತಿಮ ಘಟ್ಟ ತಲುಪೋವರೆಗೆ ಅದರ ಪ್ರಯೋಗ ಆಗಿದೆ ಅಂತ ಗೊತ್ತಾಗೋದು ಕಡಿಮೆ.. ಇನ್ನೊಂದು ಇವರ ಪ್ಲಾನ್ ಪ್ರಕಾರ ಪಲ್ಲವಿ ಇಂಡಿಯಾದಲ್ಲಿ ಇದಾಳೆ.. ಆದರೆ ವಾಸ್ತವ ಬೇರೆ.. ಪಲ್ಲವಿ ಇರೋದು ಬ್ಯಾಂಕಾಕ್ ನಲ್ಲಿ..
To be continued...

ಮುಂದಿನ ಭಾಗದಲ್ಲಿ ನಿರೀಕ್ಷಿಸಿ

ಉಗ್ರಗಾಮಿಗಳಿಂದ ಪಲ್ಲವಿ ಪಾರಾಗಿದ್ದು ಹೇಗೆ ?
ಶಕೋಚಿ ಪ್ರಯೋಗ ಆದರೂ ರಾಜೀವ ಬದುಕುತ್ತಾನಾ ?
ಕನಕ ಕೀರ್ತಿಯ ಮಾಸ್ಟರ್ ಪ್ಲಾನ್ ಇಂದ ಬಚಾವ್ ಆಗ್ತಾಳಾ ?
ಕನಸಿನ ಕುದುರೆ ಏರಿ ....




ಕನಸಿನ ಕುದುರೆ ಏರಿ - ೫


ಕನಸು ಹಾದಿ ತಪ್ಪುತ್ತೆ ಆದ್ರೆ ಕನಸು ಕಾಣೋರು ಹಾದಿ ತಪ್ಬಾರ್ದು..


ಪ್ಲಾನ್ ಪ್ರಕಾರ ಇಂಡಿಯಾ ಗೆ ಬಂದ ಕುಮಾರ ರಾಜೀವ ಮೊದಲು ಹೋಗಿದ್ದು ಜೂಜುಕೋರರ ಸ್ವರ್ಗ ಗೋವಾ ಕ್ಕೆ.. Casino ಬೋಟೊಂದರ ಮಾಲೀಕ ಕುಮಾರನಿಗೆ ಪರಿಚಯ.. ಅಲ್ಲಿ ಹೋದಾಕ್ಷಣ ರಾಜ ಮಾರ್ಯಾದೆಯ ಸ್ವಾಗತ ಬೋಟೊಳಗೆ ಕಾಲಿಡುತ್ತಿದ್ದಂತೆ ಸ್ವರ್ಗದಂತ ಸೌಂದರ್ಯಕಂಡು casual ಆಗಿ ಬೋಟ್ ನ ರೇಟ್ ಕೇಳ್ತಾರೆ.. (ರಘು ಬೋಟ್ ಓನರ್.) ಅದಕ್ಕೆ ರಘು 32 ಕೋಟಿ ಅಂತಾನೆ.. ಇಬ್ಬರು ಮುಖಮುಖ ನೋಡಿಕೊಳ್ತಾರೆ..

ಬಂದ ವಿಷಯ ಹೇಳ್ತಾರೆ.. ಅದಕ್ಕೆ ರಘು ಉತ್ತರ ಶಾಕಿಂಗ್ ಆಗಿರುತ್ತೆ.. ರಘು ಉತ್ತರ ಹೀಗಿತ್ತು : 22 casino boat ಗಳಿಗೆ ಮಾಲೀಕರಾಗಿದ್ದದ್ದು ಕನಕಾಳ ತಂದೆ ಐ ಮೀನ್ ರಾಜೀವನ ತಂದೆ ಜಯರಾಜ್ ಅದಕ್ಕೆ ವಿಷಕಂಟ ಕುಲಕರ್ಣಿ ಅಲಿಯಾಸ್ V K partner .. ದಿನದ ಸಂಪಾದನೆ 13 ಕೋಟಿ.. ಎಲ್ಲಾ pure ಬ್ಲಾಕ್ ಮನಿ..

ವಿಷಕಂಟನ ಮಗ ಚಕ್ರಿ ಪಲ್ಲವಿನ ಇಷ್ಟಪಟ್ಟಿದ್ದ ಆದರೆ ರಾಜೀವ ಅವನ ದಾರಿಗೆ ಮುಳ್ಳಾಗಿದ್ದ ಅದಕ್ಕೆ ಅವನನ್ನ ಸಾಯಿಸಿ ಕೀರ್ತಿ ಮೇಲೆ ಆಪಾದನೆ ಹೊರಿಸಿದ್ದ ರಾಜೀವ ಬದುಕಿರೋದು ಗೊತ್ತಾಗಿ ಈಗ ಪಲ್ಲವೀನ ಕಿಡ್ನಾಪ್ ಮಾಡಿರೋದು ಅಂತ ರಘು ಹೇಳಿದ್ ಕೇಳಿ ಇಬ್ಬರು ಶಾಕ್ ಆಗ್ತಾರೆ.. ಈಗ ಪಲ್ಲವಿ ಎಲ್ಲಿ ಅಂತ ಕೇಳ್ತಾರೆ ಅದಕ್ಕೆ ರಘು ಚಕ್ರಿಯ right hand ನಾಗನ್ನ ಕೇಳಿದ್ರೆ ಗೊತ್ತಾಗುತ್ತೆ ಅಂತ ಹೇಳಿ ಕರಕೊಂಡು ಹೋಗ್ತಾನೆ..


ಅದು ಕಿಕ್ ಬಾಕ್ಸಿಂಗ್ ಅಡ್ಡ.. ಮನುಷ್ಯರಿಗೆ ಬೆಲೆ ಇಲ್ಲ ಹೊಡಿ ಬಡಿ ಹಣ ಪಡಿ ಅನ್ನೋ ಮೂಲಮಂತ್ರ ಜಪಿಸೋ ಜಾಗ.. ನಾಗ marshal art specialist.. ಆದ್ರೆ ಅವರು ಕಲಿತಿರೋ ವಿದ್ಯೆಗಿಂತ ನಮ್ ಕುಮಾರನ ಎಮೋಶನ್ ಗೆ ಹೆಚ್ಚು ಪವರ್ 5 ನಿಮಿಷದಲ್ಲಿ ಇಡಿ ಬಾಕ್ಸಿಂಗ್ ಕ್ಲಬ್ ನ ಎಲ್ಲ ಫಂಟರು ಕಾಲಡಿಯಲ್ಲಿ.. ಒಂದು ಕೈ ಇಂದ ನಾಗನ ಕತ್ತು ಹಿಡಿದು ಮೇಲೆತ್ತಿ ಎಲ್ಲೋ ನನ್ ತಂಗಿ ಅಂದಾಗ ನಾಗ ಹೇಳ್ತಾನೆ : ನಾವ್ ಪ್ಲಾನ್ ಮಾಡಿದ್ ಹೌದು ಬಟ್ ಕರೀಂ ಖಾನ್ ಕಡೆಯವರು ನಮ್ ಹುಡುಗರನ್ನ ಹೊಡದು ಆ ಹುಡ್ಗಿನ ಎತ್ಕೊಂಡ್ ಹೋದ್ರು ಅಂದಾಗ ಕುಮಾರ ಇವಾಗ್ ಎಲ್ಲಿ ಇದಾಳೆ ನನ್ ತಂಗಿ ಅಂತ ಕೇಳ್ತಾನೆ.. ಅದಕ್ಕೆ ಬಂದ ಉತ್ತರ ಅಫ್ಘಾನಿಸ್ತಾನ... ಹೊರಡೋಣ ಅನ್ನೊವಷ್ಟರಲ್ಲಿ ರಾಜೀವ ರಕ್ತ ವಾಂತಿ ಮಾಡ್ಕೊಂಡು ಬಿಳ್ತಾನೆ.. ಇದನ್ನ ನೋಡಿ ರಘು ಇದು ಶಕೋಚಿ ನೀನ್ ಹೋಗಿ ಪಲ್ಲವೀನ ಕಾಪಾಡು ನಾನ್ ಇವನನ್ನ ನೋಡ್ಕೋತೀನಿ ಅಂತಾನೆ.. ಕುಮಾರ ಕರೀಂ ಖಾನ್ ಅಡ್ಡಕ್ಕೆ ಹೋಗಲ್ಲ ಅದರ ಬದಲು ಬ್ಯಾಂಕಾಕ್ ಹೋಗ್ತಾನೆ.. ನಾಗ ಮಾಡಿರೋ ಪ್ಲಾನ್ ಕುಮಾರನಿಗೆ ಡೌಟ್ ಬಂದಿರುತ್ತೆ ಅದಕ್ಕೆ ನೇರವಾಗಿ ಚಕ್ರಿ ಇರೋ ಜಾಗಕ್ಕೆ ಹೊರಡ್ತಾನೆ..


ಇತ್ತ ಮಹಾ ಶುಕ್ರ ಗ್ರಹಣ ಹತ್ತಿರ ಬರ್ತಾ ಇದೆ.. ಕೀರ್ತಿಗೆ ಕನಕಾ ಕೈ ಗೊಂಬೆಯಾಗಿರೋದ್ರಿಂದ ಆಗೊಮ್ಮೆ ಈಗೊಮ್ಮೆ ಮೈಕೈ ಸವರುತ್ತಾ ತನ್ನ ಕ್ಷಣಿಕ ಚಪಲ ತೀರಿಸಿ ಕೊಳ್ತಾ ಇರ್ತಾನೆ.. ಹಾಗೆ ಬ್ರಹ್ಮ ಕಮಲ ತರೋಕೆ 4೦೦ ಜನರ ತಂಡವನ್ನ ಕಳಿಸಿದ್ದಾನೆ.. ಈ ಭಾರಿ ಖಳನಾಯಕರ ಮೇಲುಗೈ.. ಬ್ರಹ್ಮ ಕಮಲ ಕೂಗಳತೆಯ ದೂರದಲ್ಲಿ .. ಇನ್ನೊಂದೆಡೆ ಉಗ್ರಗಾಮಿಗಳ ಕೈವಷ ವಾಗಿದ್ದ ಪಲ್ಲವಿ ಚಕ್ರಿಯ ಬುಟ್ಟಿಗೆ.. ಉಗ್ರಗಾಮಿ ಕರಿಂ ಖಾನ್ ಇನ್ನಿಲ್ಲ.. ಕರಿಂ ಖಾನ್ ಅಂಡರ್ ಕವರ್ ಆಪಿಸರ್ ಶರತ್ ನಿಂದ ಸತ್ತಿದಾನೆ.. 300 ಜನರ ಚಕ್ರವ್ಯೂಹ ಭೆದಿಸಿ ಕರೀಂ ಭಾಯ್ ನನ್ನ ಸಾಯಿಸೋದು ಸಣ್ಣ ವಿಷಯ ಅಲ್ಲ.. ಆದರೆ 88 ಎನ್ಕೌಂಟರ್ ಮಾಡಿರೋ ಶರತ್ ಗೆ ಇದು ನೀರು ಕುಡಿದಷ್ಟೇ ಸುಲಭ.. ಪಲ್ಲವಿ ನ ಕರಿಂ ನಿಂದ ಬಿಡಿಸಿ ಶರತ್ ಕರೆತರ್ತಾನೆ.. ಆದರೆ ‌‌...


ಪಲ್ಲವಿ ಇರೋದು ಚಕ್ರಿಯ ಬಳಿ..
ಬ್ಯಾಂಕಾಕ್ ತೆರಳಿದ್ದ ಕುಮಾರನ ಎದುರು ಗನ್ ಹಿಡಿದಿರುವ ಶರತ್..
ಸಾವಿನೊಂದಿಗೆ ಆಟವಾಡ್ತಿರೋ ರಾಜೀವ..
ನಾಗ ನಿಧಿ ಮತ್ತು ಕನಕಾಳ ಗುಂಗಿನಲ್ಲಿ ಕೀರ್ತಿ
ಕೀರ್ತಿಯ ಕೈಗೊಂಬೆಯಾಗಿ ಕನಕ


ಕನಸಿಗು ಒಂದು ಮಿತಿ ಇದೆ ಕನಸು ಅದೇ ನನಸಾದರೆ ಚಂದ.. ಅದನ್ನ ನನಸಾಗಿಸಿಕೋಳ್ಳೊಕೆ ಪ್ರಯತ್ನಿಸಿದ್ರೆ ವಿಧಿಯ ಮೇಲೆ ಸವಾರಿ ಮಾಡಿದಂತೆ..


ಸದ್ಯಕ್ಕೆ ವಿಧಿಗೆ ಸೆಡ್ಡು ಹೊಡೆಯುತ್ತಿರುವ ಕೀರ್ತಿ ಚಕ್ರಿ ಆಟಕ್ಕೆ ವಿಧಿಯ ಉತ್ತರ ಮುಂದಿನ ಭಾಗದಲ್ಲಿ...


ಈ ಐದು ಭಾಗಗಳಿಗೆ ಪ್ರತಿಕ್ರಿಯಿಸಿ ಬರೆಯುವ ಆಸೆ ಹೆಚ್ಚಿಸಿದ ಎಲ್ಲರಿಗೂ ಧನ್ಯವಾದಗಳು..
ಇನ್ನೂ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿ...
ಕನಸಿನ ಕುದುರೆ ಏರಿ...







No comments:

Post a Comment