Friday 30 December 2011

ದ್ವೀಪದಲ್ಲಿ ದೀಪಧರ

ಆಕಾಶದ ಬುಡ ತುದಿ ನೋಡ್ತಾ boat ಚಲಿಸಲು ಡ್ರೈವರ್ ಶ್ರೀದರ ಮುಂದಾದ. ಅಷ್ಟರಲ್ಲಿ ದೂರದಲ್ಲ ಯಾರೊ ಕಿರುಚಿದಂತೆ ಭಾಸವಾಗಲು boat ನಲ್ಲಿದ್ದ ಶ್ರೀಧರ ಹಾಗೂ ಪ್ರದೀಪ ಇಬ್ಬರೂ ತಿರುಗಿ ನೋಡಿದರು ಆಗ ನೌಕೆಯ ಚಾಲಕ ಶ್ರೀಧರನ ತಂದೆ ಒಂದು ತಾಯತವನ್ನ ಕೈಗೆ ಕಟ್ಟಿ ಎಚ್ಚರ ನೀವು ಹೋಗುತ್ತಿರುವ ಪುಷ್ಕರಣೀ ದ್ವೀಪ ಸಂಚಾರೀ ಆತ್ಮಗಳ ಆವಾಸ ಸ್ತಾನ ಏನೇ ಕಂಡರೂ ಅದು ಕೇವಲ ಮಾಯೆ ಕೇವಲ ಕ್ಷಣಿಕ ಅದೊಂದು ಮಾಯಾಬಜಾರ್ ಇಂದ್ದಂತೆ ಅಂತ ಫಿಟಿಂಗ್ ಇಟ್ರು ಆದ್ರೆ ಶ್ರೀಧರ ಮತ್ತು ಪ್ರದೀಪ ಅಂತ ಮಾತಿಗೆಲ್ಲ ತಲೆಕೆಡಿಸಿಕೊಳ್ಳೊ ಜಾಯಮಾನದವರಲ್ಲ ಏನೇ ಬಂದರೂ ಜಗ್ಗದೇ ಕುಗ್ಗದೇ ತಮ್ಮ ಮನದಾಳದಲ್ಲಿ ಅಡಗಿರುವ ಕನಸಿನಲ್ಲಿ ಉತ್ತುಂಗಕ್ಕೇರಿದ ಆಸೆಯೊಂದರ ಹುಡುಕಾಟಕ್ಕೆ ಪುಷ್ಕರಣಿ ಎನ್ನುವ ಕುಖ್ಯಾತ ದ್ವೀಪವೊಂದಕ್ಕೆ ತೆರಳುತ್ತಿದ್ದಾರೆ. ಹೇಳೋಕೆ ಮರ್ತಿದ್ದೆ ಬೆಂಗಳೂರಿಂದ ಹೊರಟ ಇವರು ಅಂಡಮಾನ್ ಗೆ ಬಂದು ಅಲ್ಲಿ ಬೊಟ್ ತಗೊಂಡು ಪುಷ್ಕರಣೀ ದ್ವೀಪಕ್ಕೆ ಹೊರಟಿದ್ದಾರೆ. ಹಸಿರು ಬಣ್ಣದ ಹವಳವೊಂದು 20 ಕೋಟಿ ಬೆಲೆಬಾಳುತ್ತೆ ಅದು ಕೇವಲ ಪುಷ್ಕರಣೀ ದ್ವೀಪದಲ್ಲಿ ಸಿಗುತ್ತೆ ಅಂತ ವಿದೇಶಿ ವ್ಯಾಪಾರ ಕಂಪನಿಯೊಂದು ಆಸೆ ಹುಟ್ಟಿಸಿದ ಹಿನ್ನೆಲೆಯಲ್ಲಿ ಇವರೀರ್ವರೂ ನೌಕಾಯಾನ ಮಾಡಬೇಕಾಗಿ ಬಂದಿದೆ.

boat ಮುಂದಕ್ಕೆ ಸಾಗಿದಂತೆ ಪ್ರದೀಪ ಟೈಂ ಪಾಸ್ ಗೆ you tube ನಲ್ಲಿ ಏನೊ ನೋಡ್ತಾ ಯರ್ರಾಬಿರ್ರಿ ನಗ್ತಾ ಇದ್ದ. ಏನು ಅಂತ ಶ್ರೀಧರ ಕೇಳ್ದಾಗ smile ಕೊಡ್ತಾ ಟಾಮೆಂಜರಿ ಅಂದ ಶ್ರೀಧರ್ ಗೆ ನಗು ತಡಿಯೋಕೆ ಅಗದೇ "ಪಾಪಾ ಚಿಕ್ಕ ಮಗು ಅಲ್ವಾ ನೋಡು ನೋಡು ಮಾಡೋಕ್ ಬೇರೆ ಕೆಲಸ ಇಲ್ಲ ಇಲಿ ಬೆಕ್ಕಿನಾಟ ನೋಡ್ತಾನಂತೆ" ಅಂದ. ಸುಮಾರು ದೂರ ಹೊದ ನೌಕೆ ಇದ್ದಕ್ಕಿದ್ದಂತೆ stop ಆಯಿತುಅಲ್ಲಿ ಮೊಬೈಲ್ ಸಿಗ್ನಲ್ ಕೈಕೊಟ್ಟಿತು. ಇತ್ತ ಪ್ರದೀಪಂಗೆ ಟಾಮೆಂಜರಿ ನೋಡೋಕೆ ಆಗದೆ ಚಡಪಡಿಸುತ್ತಿದ್ದ ಅವನನ್ನ ನೋಡಿದ ಶ್ರೀಧರ ಕೋಪಗೊಂಡು "ಅಯ್ಯೊ ಲೆ ಇಲ್ಲಿ ನಮ್ ಗಾಡಿ ಕೆಟ್ಟು ನಿಂತಿದೆ ನಿನ್ ನೋಡಿದ್ರೆ ಹಾಳಾದ್ ಬೆಕ್ ಇಲಿ ಹಿಡಿತಿರೊ ಆಟ ನೋಡ್ತಿಯಾ" ಅದಕ್ಕೆ ಪ್ರದೀಪ " ಏನ್ ಮಾಡ್ಬೇಕು ಅಂತೀಯ ಕೆಳಗಿಳಿದು ತಳ್ಳಬೇಕಾ" ಅದಕ್ಕೆ ಶ್ರೀಧರ "ನಿನ್ನ ಕರಕೊಂಡು ಬರೋ ಬದ್ಲು ನಮ್ ಅಪ್ಪನ್ನ ಕರಕೊಂಡು ಬಂದ್ರೆ ನಾಲ್ಕು ಮಂತ್ರ ಉದರಿಸಿ ಗಾಡಿ ಸರಿ ಮಾಡ್ತಿದ್ರೋ ಏನೊ" ಪ್ರದೀಪ "ನಂಬರ್ ಕೊಡು ಪೋನ್ ಮಾಡಿ ಕರಸ್ತೀನಿ" ಶ್ರೀಧರ "ಹೂ ಬೆನ್ನಿಗೆ ಕಟ್ಟಕೊಂಡು ಬಂದಿದ್ದೀಯ ನೋಡು ಮೊಬೈಲ್ ಸಿಗ್ನಲ್ ಟವರ್ ನ ಪೋನ್ ಮಾಡ್ತಾನಂತೆ ಪೋನು" ಪ್ರದೀಪ " ಸ್ವಲ್ಪ ಸೈಡಿಗ್ ಜರಗು ನಾನೊಂದ್ ಕೈ ನೋಡ್ತೀನಿ " ಇದ್ದಕ್ಕಿದ್ದಂತೆ boat ( ನೌಕೆ ) ಸ್ಟಾರ್ಟ್ ಆಯಿತು ಪ್ರದೀಪ "ನೋಡು ಹೇಂಗೆ ನಾವ್ ಎಲ್ಲಾ ಕೆಲಸಾನು ಗೊತ್ತು ಬೆಂಗಳೂರ್ ಏರ್ ಪೊರ್ಟನಲ್ಲಿ ಹೊರಡೋವಾಗ ಹೇಳಿದ್ದು ನೆನಪಿದ್ಯಾ ನಾನೊಂತರ ಸಕಲ ಕಲಾ ವಲ್ಲಭ ಇದ್ದಂಗೆ"

ಶ್ರೀದರ "ಆಯಿತಪ್ಪಾ ಮಹಾನುಭಾವ ಕವಿ ಮಹೋದಯ ಅಲ್ಲಿ ಸೂರ್ಯ ಮುಳಗೋ ಟೈಂ ಆಯಿತು ಹೋಗಿ ಏನಾದ್ರೂ ಗೀಚ್ಕೊಳ್ತಾ ಕೂತ್ಕೊ" ಅದಕ್ಕೆ ಪ್ರದೀಪ good evening ಅಂತ ವಿಷ್ ಮಾಡಿ ಪ್ಲಾಸ್ಕ್ ನಲ್ಲಿ ಇದ್ದ ಕಾಫಿಯನ್ನ ಕಫ್ ಗೆ ಹಾಕಿ ಪೇನ್ ಪೇಪರ್ ತಕೊಂಡು ಡೆಕ್ ಗೆ ಬಂದ ನಮ್ ಪ್ರದೀಗೆ ಕವಿತೆ ಬರೆಯೋ ಹವ್ಯಾಸ ಇತ್ತು. ಇದ್ದಕ್ಕಿದ್ದಂತೆ ವಾಯುದೇವ ತನ್ನ ಹೆಂಡತಿ ಜೊತೆ ಜಗಳಮಾಡ್ಕೊಂಡು ಬಂದನೊ ಅನ್ನೋತರ ಜೋರಾಗಿ ತನ್ನ ಪ್ರಥಾಪ ತೋರಿಸೋಕೆ start ಮಾಡಿದ. ಸಮುದ್ರದ ಅಲೆಗಳು ನಾಹೆಚ್ಚು ನಾಹೆಚ್ಚು ಅನ್ನೋತರ ಹೈಜಂಪ್ ಮಾಡ್ತಾ ಶೋಯೆಬ್ ಅಕ್ತರ್ ನ ಬೌಲಿಂಗ್ ನ ಬಾಲ್ ಸ್ಪೀಡ್ ನಲ್ಲಿ boatಗೆ ಬಡಿಯೀತು. control ತಪ್ಪಿ ಕೆಳಕ್ಕೆ ಬಿದ್ದ ನಮ್ಮ ಶ್ರೀಧರ ಸಮುದ್ರದ ಉಪ್ಪುನೀರಿನ ಟೇಸ್ಟ್ ನೋಡಿ ಕೂಗಿದ ಪ್ರದೀ help. ಅದನ್ನ ನೋಡಿದ ಪ್ರದೀಪ ಹಗ್ಗ ತಂದು ಕೆಳಕ್ಕೆ ಹಾಕಿದ ಆದರೆ ಗಾಳಿ ಸ್ಪೀಡ್ ಗೆ ಅಲೆಗಳು ಬಟ್ಟೆ ಒಗೆಯೋ ತರ ಶ್ರೀದರನನ್ನ boat ಡಿಕ್ಕಿ ಹೊಡಿಸ್ತಾ ಇತ್ತು. ಇದರಿಂದ ಅವನ ಮೈಮೇಲೆ ಅಲ್ಲಲ್ಲಿ ನಾಯಿಕಚ್ಚಿದ ತರ ಮೈಪರಚಿ ಹೋಗಿ ರಕ್ತ ಡ್ಯಾಮ್ ನಲ್ಲಿ ಬಿಟ್ಟ ನೀರನಂತೆ ಸಮುದ್ರಕ್ಕೆ ಬೀಳ್ತಾಇತ್ತು. ಹಾಗಾಗಿ ಹಗ್ಗ ಹಿಡ್ಕೊಳ್ಳೊ power ನಮ್ ಶ್ರೀ ಗೆ ಇರಲಿಲ್ಲ ಅದಕ್ಕೆ ಪ್ರದಿ ದೊಡ್ಡ ಮನಸ್ಸುಮಾಡಿ ಬೋಟ್ ನ ಕಂಬವೊಂದಕ್ಕೆ ಹಗ್ಗ ಕಟ್ಟಿ ತಾನೇ ನಿಧಾನವಾಗಿ ಕೆಳಗಿಳಿದ. ಕೈ ಕೊಟ್ಟು ಹೇಗೋ ಸರ್ಕಸ್ ಮಾಡಿ ಶ್ರೀನ ಕರಕೊಂಡು ಬೋಟ್ ಮೊಲೆ ತಂದ. ಶ್ರೀಗೆ ಮಾತಾಡೋ ಶಕ್ತಿನೂ ಇರಲಿಲ್ಲ. ಆದರೆ ವಾಯುದೇವನ ಗಾಳಿ ಸ್ಪೀಡ್ ಗೆ ಬೋಟ್ ತಂತಾನೆ ಪುಷ್ಕರಣಿ ಬಳಿ ಬಂದಿತ್ತು ಕೆಲದೂರ ಮಾತ್ರ ಬಾಕಿ ಇತ್ತು ಪ್ರದಿ "ಅಂತೂ ಕತ್ತಲಾಗೋದ್ರೊಳಗೆ ನೆಲ ಸಿಕ್ತಾ ಇದೆ ನಮ್ ಪುಣ್ಯ ಶ್ರೀ ನೋಡೋ ಸಕ್ಕತ್ತಾಗಿದೆ ಕಣೋ ದ್ವೀಪ" ಅಂದ ಅದಕ್ಕೆ ಶ್ರೀ "ನಾನಿಲ್ಲಿ ಯಮನ ಜೊತೆ ಜೂಟಾಟ ಆಡ್ತಿದಿನಿ ನಿಂಗೆ ಆದ್ವೀಪನೆ ಹೆಚ್ಚಾಯಿತಾ ಮೊದ್ಲು ಆ ಮೆಡಿಕಲ್ ಕಿಟ್ ಕೊಡು ಪ್ರಾಣ ಹೋಗ್ತಿದೆ" ಅಂದ ಅಂತೂ ನಮ್ಮ BOAT ಪುಷ್ಕರಣಿಗೆ ಬಂದು ಸೇರ್ತು. ಅದೇ ಟೈಂಗೆ ಸರಿಯಾಗಿ ನಮ್ಮ ರವಿಮಾಮ ಟಾಟಾ ಮಾಡ್ತಾ ನಾಳೆ ಸಿಕ್ತೀನಿ ಅಂತ ಹೇಳ್ತಾ ಇದ್ದಾಗ್ಲೇ ಚಂದಾಮಾಮ ಶರಪಂಜರ ಕಲ್ಪನಾ ಸ್ಟೈಲ್ ನಲ್ಲಿ ನಾಬಂದೆ ನಾಬಂದೆ ಅಂತ ಹೇಳ್ತಾ ಬೆಳ್ಳಿಬಟ್ಟಳಂತೆ ಕಾಣಿಸ್ಕೊಂಡ.. ಇಬ್ಬರೂ 1 ಮರಕ್ಕೆ ಟೆಂಟ್ ಕಟ್ಟಿ ಮಲಗೊ ಸ್ಕೆಚ್ ಹಾಕಿ ಬೋಟ್ ನಿಂದ ಇಳಿದರು. ದ್ವೀಪ ನೋಡ್ತಾ ನೋಡ್ತಾ ಪ್ರದಿ "ಭೂಮಿಗಿಳಿದ ಸ್ವರ್ಗವೋ ದೇವಲೋಕದ ಇಂದ್ರನಾಸ್ತಾನ ಅಮರಾವತಿಯೋ" ಅಂತ ಕುಯ್ಯೋಕೆ ಸ್ಟಾರ್ಟ್ ಮಾಡಿದ್ದನ್ನ ನೋಡಿ ಶ್ರೀ ಸಿಟ್ಟಿನಿಂದ "ಹಾಗೇ ಆ ಸ್ವರ್ಗದಲ್ಲಿ ರಂಬೆ ಊರ್ವಶಿ ಯಾರಾದ್ರೂ ಇದಾರ ನೋಡಿ ಅವ್ರಿಗೆ ಕಾಳ ಹಾಕು ಆರಾಮಾಗಿ ಸ್ವರ್ಗದಲ್ಲೇ ಜೀವನ ಪೂರ್ತಿ ಇರಬಹುದು ಮೊದ್ಲು ಆ ಹಗ್ಗ ತಗೊ ಟೆಂಟ್ ಕಟ್ಟಬೇಕು ರಾತ್ರಿ ಮಲಗೋದು ನಂಗೆ ಅಭ್ಯಾಸ" ಅಂದ ಇಬ್ಬರೂ ಸೇರಿ ಟೆಂಟ್ ಕಟ್ಟಿದ್ರು. ಬೆಂಗಳೂರಿನ MTR ಹೊಟೆಲ್ ನಿಂದ ತಂದಿದ್ದ ಚಪಾತಿ ಒಳ್ಳೆ ಮರದ ತುಂಡಿನ ತರ ಆಗಿತ್ತು. ಬೇರೆ ಏನು ಇಲ್ಲಾಂತ ಅದನ್ನೇ ತಿಂದರು ಮಲಗಬೇಕು ಅನ್ನೋವಷ್ಟರಲ್ಲಿ ದೂರದಲ್ಲಿ ಒಂದು ಬಾಳೆಮರ ಕಂಡಿತು ಪ್ರದಿ ಜೋರಾಗಿ ಓಡಿಹೋಗಿ ಬಾಳೆಗೊನೆ ಕಟ್ ಮಾಡಿ ತಗೊಂಡ್ ಬಂದು ಅಂದ "ಪುಣ್ಯ ಬಟ್ರಕೈನ ಒಣಕಲು ಚಪಾತಿ ಮಾತ್ರ ಅಂದ್ಕೊಂಡಿದ್ದೆ ಸ್ಪೆಶಲ್ ಬನಾನಾ ಸಿಕ್ತು ಬೇಕೇನೊ ಶ್ರೀ" ಅಂದ ಅದಕ್ಕೆ ಶ್ರೀಧರ "ಏನ್ ಕಣಿ ಕೇಳ್ತೀಯಾ ಒಂದ್ 10 ಹಣ್ಣ ಕೊಡು ಚಪಾತಿ ಹೊಟ್ಟೆ ಒಳಗೆ ಡಾನ್ಸಮಾಡ್ತಿದೆ" ಅಂದ. ಇಬ್ಬರೂ ಬಾಳೆ ಹಣ್ಣನ್ನ ತಿಂದು ನಾಳೆ ಹವಳ ಹುಡ್ಕಬೇಕು ಅಂತ ಮಾತಾಡ್ಕೊಂಡು ಹಾಸಿಗೆಹಾಕ್ಕೊಂಡು ಮರದಡಿ ಕಟ್ಟಿದ್ದ ಟೆಂಟ್ ನಲ್ಲಿ ಮಲಗಿದ್ರು. ಚಳಿ ಸ್ವಲ್ಪ ಜಾಸ್ತಿ ಇತ್ತು ಅದಕ್ಕೆ ಎದುರಿಗೆ ಬಿದ್ದಿದ್ದ ನಾಲ್ಕು ಕಟ್ಟಿಗೆ ತಕೊಂಡು ಬೆಂಕಿ ಹಾಕಿ ಮಲಗಿದ್ರು ಸುಖವಾಗಿ ಮಲಗಿದ್ದ ಇವರಿಗೇನ ಗೊತ್ತು ಮುಂದೆ ಬರೊ ಆಪತ್ತು ಅದು ಪುಷ್ಕರಣೀ ದ್ವೀಪ ಅಂತ ಅವರು ಮರತಿದ್ರೋ ಅಥವಾ ಮೊಂಡು ದೈರ್ಯವೊ ಬಿಸಿರಕ್ತದ ಉತ್ಸಾಹವೊ ಗೊತ್ತಿಲ್ಲ. ಆದರೆ ಅವರ ನಿದ್ರೆ ಕೇವಲ ಕ್ಷಣಿಕ ಆಗಿತ್ತು

ಮುಂದುವರೆಯುವುದು

Thursday 29 December 2011

ಪ್ರೇಮಗೀತೆ

ಮನವನು ಕಾಡುವ
ಚೆಲುವೆಯ ನೋಟವು
ಸೆಳೆಯಿತು ನನ್ನೆದೆ ಪ್ರೀತಿಯನು
ಎದೆಯಲಿ ಮೂಡಿತು
ಪ್ರೀತಿಯ ಸ್ವಪ್ನವು
ಹಾತೊರೆದೆ ಕಾಣಲು ನಾ ನಿನ್ನನು

ಆಸೆಯ ಭಾವವು
ನಿನ್ನಯ ಮೋಹವು
ತೆರೆಯಿತು ಮನಸಿನ ನಯನವನು
ಹೇಳಲಿ ಯಾರಿಗೆ
ನನ್ನಯ ಈ ಪರಿ
ಸುಮದುರ ಪ್ರೀತಿಯ ಯಾತನೆಯ

ನಿನ್ನಲಿ ಏನೋ
ಮೋಹವನು ಕಾಣೆ
ನೀಗು ನನ್ನ ಮನದ ಬಯಕೆಯನು
ಆಡುವೆ ಏತಕೆ
ಕಣ್ಣಾ ಮುಚ್ಚಾಲೆ
ತಿಳಿಸು ಮನದಾಸೆಯನು ಒಂದುಸಲ

ಚಿಟಪಟ ಚಿಟಪಟ
ಮಳೆಹನಿ ನೋಡುತ
ಪಟಪಟ ಪ್ರೀತಿಯ ನೆನಪಾಯ್ತು
ಜುಮುಜುಮು ಜುಮುಜುಮು
ಚಳಿಯಲಿ ನನ್ನಯ
ಪ್ರೀತಿಯ ಹುಡುಗಿಯ ನೆನಪಾಯ್ತು

ಕಾಡುತ ಇದ್ದಳು
ಆಕೆಯು ನನ್ನನು
ಬೇಡಿದೆ ಅವಳಲಿ ಪ್ರೀತಿಯನು
ಹಾಡುತ ಇದ್ದರೆ
ಕೋಗಿಲೆ ಕಂಟವು
ಮಾಟವ ಮಾಡಿಹಳವಳಿಂದು

ಪಟಪಟ ನಿರ್ದಾರ
ಸರಸರ ಮಾತಿನ
ಆಕೆಯ ಪ್ರೀತಿಯು ಕನಸಾಯ್ತು
ಚಿಟಪಟ ಬೀಳುವ
ಮಳೆಹನಿಯ ನೋಡಿ
ನನಗಿಂದು ಅವಳ ನೆನಪಾಯ್ತು

ಮೋಸವ ಅರಿಯದ
ಕಪಟವ ತಿಳಿಯದ
ನನ್ನಯ ಮುಗ್ದತೆ ಮುಳುವಾಯ್ತು
ದನಿಯನು ಕೇಳುತ
ರೂಪವ ನೋಡುತ
ಅಂದು ನನ್ನ ಮನ ಸೆರೆಯಾಯ್ತು

ಮನವನು ಸೆಳೆದಿಹ
ರೂಪಸಿಗೆ ಪ್ರೀತಿಯ
ಪಾಠವ ಹೇಳಿಕೊಡೊ ಆಸೆಯಾಯಿತು
ಎಲ್ಲಿ ಹುಡುಕಿದರು
ಸಿಗದೆ ನನ್ನಾಕೆಯು
ನನ್ನಯ ಮನಸ್ಸು ಚೂರಾಯ್ತು

ಮನದಲಿ ಮೂಡಿತು
ಸುಂದರ ಕಾವ್ಯವು
ಸುಂದರಿ ನಿನ್ನನು ಕಂಡಿರಲು
ಮಾತಲಿ ತೊದಲಿಕೆ
ಏತಕೊ ಹೆದರಿಕೆ
ನಿನ್ನಯ ಪ್ರೀತಿಯನು ಬೇಡಲು

ಮನದಲಿ ತವಕವು
ಒಂಥರ ಅವಸರ
ನಿನ್ನನು ಬಹುಬೇಗ ಸೇರಲು
ಏತಕೊ ಕಾತರ
ಚಿತ್ತದಿ ಆತುರ
ಆಸೆಯ ಕೊಲ್ಲದಿರೆ ಓ ನಲ್ಲೆ

ಕನಸು ಕನವರಿಸೆ
ಮನ ತವತವಕಿಸೆ
ಎದೆಯಲಿ ಇಹುದೆನಗೆ ನೂರಾಸೆ
ಹೇಳೇ ಮನಸೇ
ಪ್ರೀತಿಯ ಕನಸೇ
ಮಾಡದಿರು ನಿರಾಸೆಯ ಮನಸೆ

ಮನಸಿನ ಮನೆಯಲಿ
ಕನಸಿನ ತೆರೆಯಲಿ
ಮೂಡಿದೆ ಒಂದು ಹನಿಗವನವು
ಪ್ರೀತಿಯಲಿ ಸೋತು
ಬಳಲುತಲಿ ನಾನು
ಕಾಲನ ಆಗಮನ ಕಾಯುವೆ

ದೇವರ ಬಳಿ ನಾ
ಬೇಡಿದೆ ಅವಳನು
ಮಾಯವೆ ಆದನು ಅವನಂದು
ಆದರೆ ಪ್ರೀತಿಯು
ಸೋಲದು ಎನ್ನವ
ಮಾತನು ನಂಬಿಹೆ ಎಂದಿಗು ನಾ

ಆಕೆಯ ಪ್ರೇಮವು
ಕಾಡುತ ಎಂದಿಗೂ
ನನ್ನಯ ಮನವನು ಚುಚ್ಚಿರಲು
ಚಿತ್ತದಿ ನೋವನು
ಮರೆಯಲು ಏನನು
ಮಾಡಲಿ ನಾನಿಂದು ಅರಿಯೆನು

ಪ್ರೇಮದ ಪಾಠವ
ಹೇಳಿ ಕೊಟ್ಟಿರುವ
ನಿನಗೆ ಪ್ರೀತಿಯ ಅರಿವಿಲ್ಲವೆ
ಮೋಸವ ಏತಕೆ
ಮಾಡಿದೆ ಎನ್ನುವ
ಕಾರಣವನು ಅರಿಯೆ ನಾ ಚಲುವೆ

Tuesday 27 December 2011

ಸಿಗುವುದೆಂದು ಸ್ವಾತಂತ್ರ್ಯ

ಶರಧಿಗೆ ನೌಕೆಯನಿಳಿಸಿ
ನೌಕೆಗೆ ನಾವಿಕರ ನೇಮಿಸಿ
ನಾವಿಕರಿಂದ ದಾರಿ ಹುಡುಕಿಸಿ
ದೇಶವಿದೇಶದಿ ವ್ಯಾಪಾರ ನಡೆಸಿ
ದೋಚುತ ಇದ್ದರು ನಮ್ಮನ್ನ

ಪರವಾನಿಗೆಯಿವರೊಳು ರಾಜರು ಕೇಳೇ
ಅವರೊಡು ಇವರು ಯುದ್ದವ ಸಾರೇ
ಅಲ್ಲಿ ಹರಿಯಿತು ನೆತ್ತರಿನ ಹೊನಲು
ಗೆಲುವನು ಪಡೆದರು ಕುತಂತ್ರಿಗಳು ಅಲ್ಲಿ
ದೋಚುತ ಹೋದರು ನಮ್ಮನ್ನ

ಕಡಲಾ ಆಚೆಯಿಂದ ಬಂದು
ಬಂದರವರು ವ್ಯಾಪಾರಕೆಂದು
ಅಸ್ತಿತ್ವ ಸ್ತಾಪಿಸಿದ್ದರು ಅಂದು
ಕರೆದೆವು ಅವರನು ಬ್ರಿಟೀಶರೆಂದು
ದೋಚುತ ಹೊದರು ನಮ್ಮನ್ನ

ಕಾಲವು ಸರಿಯೆ ಎಚ್ಚೆತ್ತ ಜನರು
ಸತ್ಯಾಗ್ರಹವ ಮಾಡಿದರು
ನೆತ್ತರ ಜೊತೆಯಲಿ ಆಟವನಾಡುತ
ದೇಶಕ್ಕಾಗಿ ಮಡಿದರು ಹುತಾತ್ಮರಾದರು
ಆದರೂ ಇವರು ದೋಚುತ ಇದ್ದರು ನಮ್ಮನ್ನ

ಬಂದರು ಗಾಂಧಿ ಬೋಸರು
ಹೋರಾಟವನಿವರು ಮಾಡಿದರು
ಬೋಸರು ಪ್ರಾಣವ ತೆತ್ತರು
ಆಂಗ್ಲರು ಸ್ವಾತಂತ್ರವನಿತ್ತರು
ಹರಿದಿತ್ತದಕೆ ಎಷ್ಟೋ ಜನರ ನೆತ್ತರು

ಪ್ರಜೆಗಳೇ ಪ್ರಭುಗಳು ಎಂದರು
ಅನರ್ಹರೂ ಮಂತ್ರಿಗಳಾದರು
ತಮ್ಮದೇ ರಾಜ್ಯ ಎನ್ನುತ ಇರುವರು
ಪ್ರಜೆಗಳ ಕಷ್ಟವ ಅರಿಯದ ಇವರು
ದೋಚುತ ಇರುವರು ನಮ್ಮನ್ನ

Monday 26 December 2011

ಒಂದು ದಿನ

ಅದೊಂದು ಸುಂದರ ಮುಂಜಾನೆಯಾಗಿತ್ತು
ಚಳಿಯಲಿ ಹೆದರಿದ ಇಬ್ಬನಿಯೊಂದು
ಈ ಧರೆಯ ಸೇರುವ ಸಮಯದಿ
ಮೂಡಣದಿ ದಿನಕರನು ಮೂಡಿ ಬಂದನು
ಬೆಳ್ಳಿಬೆಳಕನು ರವಿಯು ತಂದನು

ಬೆಳಕು ಎಲ್ಲೆಡೆ ಪಸರಿಸಲು
ಪಕ್ಷಿಗಳು ನಿದ್ರೆಯನು ಮುಗಿಸಿ
ಇಳಾದೇವಿಯ ಏಳಿಸಲೆಂದವು
ಚಿಲಿಪಿಲಿ ಸದ್ದನು ಮಾಡಿದವು
ನಲಿದಾಡುತ ಬಲು ಸಂಭ್ರಮಿಸಿದವು

ಓಡಲು ರವಿಯು ಪಡುವಣದೆಡೆಗೆ
ದಿನಕರ ಮೇಲಕೆ ಏರಿದ್ದಂತೆ
ಮರಗಳ ಎಲೆಮೇಲಿದ್ದಂತಾ
ಇಬ್ಬನಿಗಳು ಒಂದೊದಾಗಿ
ಜಾರಿ ಬಿದ್ದವು ಇಳೆಯ ಮೇಲೆ

ಮಲಗಿದ್ದಾಕೆಯ ಏಳಿಸಲು
ನೆಲದಮೇಲೆ ಹರಡಿದ್ದಂತಹ
ಜೇಡರ ಬಲೆ ಒಂದು ಇದನ್ನ ಕಂಡು
ಬೀಳಲು ಬಿಡೆನು ನಾ ಹನಿಗಳನು
ಎಂದು ಹಿಡಿಯಿತು ಕೆಲ ಹನಿಗಳನು

ಎಚ್ಚರಗೊಂಡ ಬೂಮಾತೆ
ಅವಸರದಿಂದಲಿ ಹಸಿರ ಸೀರೆಯನುಟ್ಟು
ಕಂದು ಬಣ್ಣದ ಕುಪ್ಪಸವನ ತೊಟ್ಟು
ಅಂದಗಾತಿಯು ತಾನೆಂದು
ಆನಂದದಿ ಬಂದದಳು ನಗುನಗುತ

ಓಡು ಆಟವನು ಆಡಿದರು
ಓಡಿ ಓಡಿ ನಲಿದಾಡಿದರು
ಭೂದೇವಿಯು ಸೋತು ಕಡೆಕಡೆಗೆ
ಬಳಲಿ ಬೆಂಡಾಗಿ ಓಡೋ ಆಟದಲಿ
ಹಿಡಿಯದಾದಳು ದಿನಕರನನ್ನ

ಸೋತೆನೆಂದು ತಾ ಒಪ್ಪಿದಳು
ಇಳೆಯೆ ನೀನಿನ್ನು ವಿಶ್ರಮಿಸು
ನಾಳೆ ಬರುವೆನು ಬೇಗನೆ ಎಂದು
ಪಡುವಣವನು ಸೇರಿದನು
ಲೋಕಕೆ ನಿದ್ರೆಯ ಉಣಿಸಿದನು

ಆಗಸದಿ ಕಪ್ಪು ಕವಿದಿಹುದು
ಹಾರುತಿಹುದು ಬೆಳ್ಳಕ್ಕಿ ದಂಡು
ಶಾಲೆ ಪೋರರು ಉತ್ಸಾಹದಿಂದಿರಲು
ಮತ್ತೆ ಸುರಿಯಲಾರಂಭಿಸಿತ್ತಂದು
ಸಂಜೆಯ ಮುಂಗಾರಿನ ಮಳೆ

ಮೂಡಣದಿ ಮೂಡಿಹುದು ಸಪ್ತವರ್ಣದಿ
ಮದನನ ಬಿಲ್ಲು ಬರುತಿಹ ವರ್ಷೆಯ ಸ್ವಾಗತಕೆ
ಕಪ್ಪೆಗಳು ಕರಕರ ಸದ್ದಲಿ ಮಾಡುತಿಹುದು ಭಾಷಣವ
ಭವ್ಯ ಸ್ವಾಗತದ ಬಳಿಕ ಮಳೆಯು
ಹನಿ ಹನಿಯಾಗಿ ಇಳೆಗೆ ಬೀಳಲಾರಂಬಿಸಿತು

ಗೋಧೂಳಿಯ ಸಮಯದಿ
ನಾಸಿಕವನು ಹೊಕ್ಕು
ತನುಮನವನು ಪುಳಕಿಸುವಂತೆ
ಬರುತಿತ್ತು ಧೂಳಿನಾ ಕಂಪು
ಹೊರಟವು ಭುವಿಯೊಡಲಿಂದ ಹಾತೆಗಳ ಗುಂಪು

ಸುತ್ತ ದೀಪಗಳ ಬೆಳಕಲಿ ಗರಿಗೆದರುತ್ತ
ಕುಣಿದಿಹುದು ನವಿಲುಗಳ ಒಡೆಯ
ಸಂತಸದಲಿ ನಲಿಯುತ್ತಿದೆ
ಮೃಗಖಗಗಳ ಪಡೆಯು
ಪಡೆಯುತ ಮಳೆರಾಯನ ಮುತ್ತಿನ ಮತ್ತನ್ನು

ಭುವಿ ತಾನೂ ಸಂತಸದೊಳು
ಮೈಮನ ಮರೆಯುತಲಿಹಳು
ಕಣಿಕಾಲುವೆಗಳಲಿ ಕೆಂಬಣ್ಣದ ನೀರು
ಧುಮುಕುತ್ತಲೆ ಸಾಗುತ್ತಿದೆ ತನ್ನ ಗುರಿಯೆಡೆಗೆ
ಮುತ್ತಿನಂತೆ ಕಂಗೊಳಿಸುತ್ತಿತ್ತು ಹನಿ ಕೆಸುವಿನೆಲೆಮೇಲೆ

ದಿನವದು ಮುಗಿದಿತ್ತು
ಬಾನಲಿ ತಿಂಗಳು ಮೂಡಿತ್ತು
ಊಟವ ಮಾಡಿ ಆಗಿತ್ತು
ನಿದ್ದೆಯು ನನ್ನನು ಕರೆದಿತ್ತು
ನಾನೋಡಿದ ದಿನವೊಂದು ಹೀಗಿತ್ತು

ಕವಿತೆಗೊಂದು ಕವನ

ಕಾಯುತ ನಾನು ಕುಳಿತಿಹೆನು
ಮುಂಜಾನೆಯ ಇಬ್ಬನಿಯ ಮೈಕೊರೆವ ಚಳಿಯಲಿ
ಮನಸೆಳೆವ ಸುಂದ ಹಸಿರು ಹುಲ್ಲುನೆದುರಲಿ
ಕಾದಿರುವೆ ಕವಿತೆ ಬರೆಯ ಬೇಕೆನ್ನುತಲಿ
ಕವಿತೇ ನೀನೆಲ್ಲಿ ಅವಿತಿರುವೆ

ಇಬ್ಬನಿ ದುಃಖದ ಕಂಬನಿಗಳಂತೆ ಕಂಡರೂ
ಮನಸ್ಸಿನಲ್ಲಿ ದುಗುಡ ಕೈ ನಡುಗಿಲು
ಬರೆಯಲಾಗದಾಯಿತೆನ್ನಿಂದ ಕವಿತೆಯ
ತೋಚದಾಯಿತೆನಗೆ ಪದಗಳು ಕೂಡ
ಕವಿತೇ ನೀನೆಲ್ಲಿ ಅವಿತಿರುವೆ

ಎಳ ಬಿಸಿಲ ಹೊಂಗಿರಣ ನೋಡುತ
ಜಿನುಗುವ ತುಂತುರು ಮಳೆಯ ನೋಡುತ
ಬರೆಯ ಬೇಕೆನಿಸಿತು ಕವಿತೆ ಮತ್ತೊಮ್ಮೆ
ಈಗಲೂ ಮತ್ತೆ ಅದೇ ತೊಂದರೆ
ಕವಿತೇ ನೀನೆಲ್ಲಿ ಅವಿತಿರುವೆ

ಅದೇ ಯೋಚನೆ ಮುಸ್ಸಂಜೆಗೆ
ಮುದುಡಿ ಹೋಗುವ ಈ ಸುಮದ ಬದುಕಂತೆ
ಮತ್ತೆ ನಡುಕವೆಂದೆನಿಸಿತು ಕವಿತೆ ಬರೆಯಲೇನು?
ಮತ್ತೆ ಬರೆಯೋಣ ಅಂದು ಕೊಂಡರೆ
ಕವಿತೇ ನೀನೆಲ್ಲಿ ಅವಿತಿರುವೆ

ಉರಿಯುವ ಮಧ್ಯಾಹ್ನದ ಬೇಗೆಯಂತೆ
ಮನದಾಳದ ಯಾತನೆ ಮುಸ್ಸಂಜೆಯಲಿ
ಬಿರಿಯುವ ಮಲ್ಲಿಗೆಯ ಹೂವಿನಂತೆ
ಗೂಡು ಸೇರುವ ಹಕ್ಕಿಚುಕ್ಕಿಯಂತೆ
ಕಾದರೂ ಬಾರದೇ ಕವಿತೇ ನೀನೆಲ್ಲಿ ಅವಿತಿರುವೆ

ನಭದಿ ಚಂದ್ರಮನು ಕಾಣುತಿರಲು
ಕವಿತೆಗೆ ಹುಡುಕಿದರೆ ಪದ ಪುಂಜಗಳು ಸಿಗದಿರಲು
ಏನ ಬರೆಯಲಿ ನಾ ಖಾಲಿ ಪುಟದಲಿ
ಕವಿತೆ ಬರೆವುದು ಇಂದೆನಗೆ ಕನಸಾಯ್ತೆ
ಕವಿತೆ ನೀನೆಲ್ಲಿ ಅವಿತು ಕುಳಿತಿಹೆ

ಬಾನಂಗಳದಿ ನಸುನಗುವ ಚಂದಿರನ
ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ ತಾರೆಗಳ
ನೋಡುತಿರೆ ಮನದಿ ಮಿಂಚಂತೆ ಸಾಲೊಂದು
ನೆನಪಾದರೂ ಬರೆಯಲಾಗದಾಯಿತು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಆಗೊಮ್ಮೆ ಈಗೊಮ್ಮೆ ಬೀಳುವತಿರುವ
ಉಲ್ಕೆಗಳಂತೆ ಜೀವನದಿ ಕಷ್ಟ ಸುಖಗಳದ್ವಂದ್ವ
ಒಂದೆರಡು ಸಾಲು ಬರೆಯಲೂ ತಡಕಾಟ
ಮುನಿಸೇತಕೆ ನಿನಗೆ ಕವಿತೇ ನೀ ಬರುವುದೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಬರೆಯಲೆಂದು ಲೇಖನಿ ಹಿಡಿದು ಕುಳಿತಾಗ
ಶಬ್ದಗಳಿಗೆ ತಡಕಾಡಿ ಭಾವಗಳಿಗೆ ಹುಡುಕಾಡಿ
ಪ್ರಾಸಕ್ಕೆ ಸಾಲುಗಳಿಗೆ ತಿಣುಕಾಡಿ
ಕಷ್ಟ ಪಟ್ಟರೂ ಬರೆಯಲಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ವಿಷಯದ ಆಳ ಹೊಕ್ಕಿ ಕೆದಕಿ ತೆಗೆವ
ಪಾಂಡಿತ್ಯವಂತೂ ನನ್ನಲಿಲ್ಲ
ಅರಿಯದೆ ಸುಮ್ಮನಿರುವ ಮುಗ್ದನೂ ಅಲ್ಲ
ಕೆದಕಿ ಬರೆಯಲೂ ಸಾದ್ಯವಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತೆ

ಕವಿತೆಯಲಿ ಪ್ರತೀ ಪದವು ಹೊಸತೆಂದೆನಿಸುವುದು
ಹೊಸ ಕಾರಣವನು ಹುಡುಕುವುದು
ಗೊತ್ತು ಗೊತ್ತಿಲ್ಲಗಳ ಬಡಿದಾಟದಿ
ಬರೆಯಲು ಹೊರಟ ನನಗಿಂದು ಅಸಾದ್ಯವಾಗಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಮನಸಿನಲಿ ಕನಸೆಂಬ ಕಲ್ಪನೆಯುಲಿ
ಕಾಣದ ಪದಗಳ ದಾರಿಯ ಹುಡುಕುತ
ಕಳೆಯುತ್ತಾ ಆಯುಷ್ಯವೆಂಬ ಸಮಯವ
ಕಾದು ಕುಳಿತೆ ಕವಿತೆ ನಾ ಬರೆಯಲೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ನೋವಿಗೆ ನಲಿವಿಗೆ ಯೋಚನೆಗೆ
ಸದಾ ತೋಚುತ್ತಿದ್ದ ಪದಗಳಿಂದು
ತನ್ನದೇ ಬಳಗವ ಬೆಳೆಸಿಕೊಂಡು
ನನ್ನಿಂದ ದೂರಕೆ ಸರಿಸುತ್ತಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಎಷ್ಟು ಕರೆದರೂ ನಿನಗೆ ಕರುಣೆ ಬಾರದೆ
ಚಿತ್ತ ಚುಚ್ಚಿ ನಿ ಎತ್ತ ಓಡುತಿರುವೆ
ಬಾವನೆಗಳ ಭಾಷೆಯರಿತ ನೀನೇ
ನನಗಿಂದೇಕೆ ಹೀಗೆ ಕಾಡುತಿರುವೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಕೂಲಿ

ದಿನವಿಡಿ ದುಡಿವ
ಬೆವರ ಸುರಿಸುವ
ಮೈಯನು ಮುರಿವ
ಕಷ್ಟವ ಪಡುವ
ಇವರು ಕೂಲಿಯವರು

ಬಳಲಿ ಬೆಂದಿರುವ
ಎದೆಗೂಡನುಬ್ಬಿಸಿರುವ
ಮೂಳೆಮುರಿವಂತೆ ಭಾರ ಹೊರುವ
ಬೇಸತ್ತು ಸತ್ತಂತಿರುವ
ಇವರು ಕೂಲಿಯವರು

ಚಿತ್ರವಿಚಿತ್ರ ಛಾಯೆ ಮೈಯಲಿ ಮೂಡಿರುವ
ಅಸ್ಪಷ್ಟ ಬದುಕ ಚಿತ್ರಣ ಇರುವ
ಬಾಳಿನ ಕಷ್ಟದ ಚಿತ್ತಾರವ
ಚಿತ್ತದಿ ಬರೆಸಿಕೊಂಡಿರುವ
ಇವರು ಕೂಲಿಯವರು

ಬದುಕು-ಬವಣೆಯ ನಡುವಿನಲಿ
ಹರಿದ-ಕರಿದ ಬೆಂದ ರೊಟ್ಟಿಗಳ
ಒಳಗೆ ರಕ್ತ ಮಡುಗಟ್ಟಿತ್ತಿದ್ದರೂ
ಎದೆಗುಂದದೆ ಈಸಿ ಜೈಸುವ
ಇವರು ಕೂಲಿಯವರು

ಬಂದು ಕೊಂದು ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ ಹೆಜ್ಜೆಯಲಿ
ನಾತ ಬೀರುವ ಕೊಳೆತಂತಿರುವ
ಅಸ್ಥಿಪಂಜರದೊಂದಿಗೆ ದುಡಿವ
ಇವರು ಕೂಲಿಯವರು

ಹಬ್ಬ ದಿಬ್ಬಣದಲ್ಲೂ
ಹಿಟ್ಟಿರದ ಬರಿ ಹೊಟ್ಟೆಯಲಿ
ಮುರುಕಲು ಗುಡಿಸಲ ಹಳೆಮಂಚದಲಿ
ನಿದ್ದೆ ಬಾರದೇ ನಡುರಾತಿಯಲಿ
ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ
ಇವರು ಕೂಲಿಯವರು

ಗೆದ್ದಲು ಕೆಡವಿ ಬಣ್ಣಹೋದ
ಹರಿದ ಉಡು ಬಟ್ಟೆ
ಆದ್ರೂ ಗಟ್ಟಿಯಿದೆ ಇವರ ರಟ್ಟೆ
ಬುತ್ತಿ ರೊಟ್ಟಿಯಲಿ ಬದುಕುವ
ಇವರು ಕೂಲಿಯವರು

ಕನಸುಗಳ ಹೆಣೆಯುವ
ಒಣದೇಹದಿ ಬತ್ತಿದಾ
ಎದೆಯಲಿನ ಆಸೆ ಮುದ್ದಿಸಿ
ಅವಕಾಶವ ಸದಾ ಬಯಸುವ
ಇವರು ಕೂಲಿಯವರು

ಇವರು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ
ಪೂರ್ತಿಜೀವನವು ಗೋಳು
ಗೊಳೆಂಬ ಈದ್ ಹೋಳಿಯಾಚರಿಸುವ
ಇವರು ಕೂಲಿಯವರು

Sunday 25 December 2011

ಸಂಗಾತಿಯಾಗು ಬಾ

ನಿಲ್ಲು ನಿಲ್ಲೆಲೆ ನಲ್ಲೆ ಓ ಚೆಲುವೆ ಪಂಚಮಿ
ಒಮ್ಮ ತಿರುಗಿ ಬಾರೆ ನಾನೊಬ್ಬ ಬಡಪ್ರೇಮಿ
ನಿ ನನ್ನ ಮನವ ಕದ್ದ ಗೆದ್ದ ಪೌರ್ಣಮಿ
ನಿನ್ನ ದನಿಯ ಇಂಚರ ಕೇಳುವಾಸೆ ನಂಗೆ ಮಾನಿನಿ
ನಿನ್ನ ಕಡೆಯ ನಿರ್ದಾರವ ತಿಳಿಸು ಒಮ್ಮೆ ಯಾಮಿನಿ

ನಿನ್ನ ಅಂದವ ಕಾಣುತ
ಬಾನ ಶಶಿಯು ಇಂದು
ಮರೆಯಾದನು ಮೋಡದಲಿ
ಮುಖ ಮರೆಸಿ ನಾಚುತ
ನಗುತಿರುವೆನಾ ಕನಸ ಕಾಣುತ

ಕಂಠ ನಿನ್ನದು ಕೋಗಿಲೆಯಂತೆ
ನಿಂತೆ ನಾ ನಿನ್ನ ಗಾನ ಕೇಳುತ
ಕೋಗಿಲೆ ಮಂಕಾಯಿತು ನಾಚುತ
ಕೇಳುತ ಅದು ಮೌನವ ತಾಳಿತು
ಬಂದು ಹಾಡಲಾರೆನೆಂದು ಹೇಳಿತು

ನಿಲ್ಲು ನಿಲ್ಲೆಲೆ ನೀಲವೇಣಿ
ಕನಸಲಿ ಕಾಡೊ ಕಾಮಿನಿ
ನನ್ನ ಬಾಳ ಬೆಳಗುವ ರಾಣಿ
ಬಾರೆ ಬೇಗ ಓ ಮಾನಿನಿ
ಬಾ ನನ್ನ ಮಂದಾಕಿನಿ

ಮಿಂಚತೆ ನೀ ಕಾಣುತ ನನ್ನ ಕಾಡುತ
ಬಳ್ಳಿಯಂತೆ ನೀ ಬಾಗುತ
ನಡೆಯಲಿ ಬೆಡಗಿ ನೀ ಬಳುಕುತ
ಗೆಜ್ಜೆಯಾ ಹೆಜ್ಜೆಯಲಿ ಕೇಳುತಿಹುದು
ನನಗಿಲ್ಲಿ ಪ್ರೀತಿಯ ಪ್ರಣಯನಾದ

ಓರೆಗಣ್ಣಿನ ಕುಡಿ ನೋಟದಿ
ನನ್ನ ನೀ ನೋಡಿದಂದು
ಬಾಳಲಿ ಬೀಸಿತು ತಂಪು ತಂಗಾಳಿ
ಮೋಸದಾಟವಾಡೆ ನೀ ಪ್ರೇಮದಿ
ತಂಗಾಳಿ ಬಿಸಿಯಾಗಿ ಆಯಿತು ಬಿರುಗಾಳಿ

ಪ್ರೇಮದ ನೆನಪು ಮನ ಕೊರೆದಿದೆ
ಕಾಣದ ಜ್ವಾಲೆ ಕಾಡುತಿದೆ
ನಡುಗುತ ನಾ ಹಾಡಿದೆ
ಏಕೆ ನೀ ನನ್ನೊಡನಾಡಿದೆ
ಪ್ರೇಮದ ಕಣ್ಣುಮುಚ್ಚಾಲೆ

ಪ್ರೀತಿ ಸಿಂಹಾಸನ ಏರಿ ಕುಳಿತ ನಿನಗೆ
ಪ್ರೇಮದ ಸೇವಕನು ನಾನಾಗಿಹೆ
ಆದರೆ ನರಕದ ನಾಯಕಿಯೇಕೆ ನೀನಾಗಿಹೆ
ಕಾರ್ಕೋಟಕ ವಿಷವನು ನೀಡದೇ
ಬಾಳಲಿ ಅಮೃತವಾಹಿನಿಯಾಗಿ ಸಿಗುವೆಯಾ

ಪ್ರೀತಿ ಉಸಿರು ಕಟ್ಟಿದೆ ಇಲ್ಲಿ
ವಿನಾಶದ ಸುಳಿಗೆ ಸಿಲುಕಿಹೆ ನಾ
ವಿಷದ ಕೂಪಕೆ ತಳ್ಳದೆ ಬಾ
ವಿವೇಕದ ಗಡಿಯ ಮೀರಹೆ ನೀ
ವಿವಾಹ ಜೀವನ ಪೂಜೆಗೆ ಬಾ

ನನ್ನಾಕೆ ನೆನಪಲ್ಲಿ

ಅಂದೆನ್ನ ಬದುಕಲಿ
ನಿಶ್ಚಯದ ದಿನದಲಿ
ನೋಡಿದ ನಿನ್ನ ರೂಪವು
ಚಿರವಾಗಿ ಚಿತ್ತದಿ ಉಳಿದಿದೆ
ಬಂದು ಸೇರೇ ಭಾವಿ ಸಂಗಾತಿ

ಬಾಯೆನ್ನ ಮನದನ್ನೆ
ಬಾಇಲ್ಲಿ ಮುದ್ದಿನ ಕನ್ಯೆ
ಬಾಬೇಗ ಓ ಸುಮತಿ
ಬಾರೆ ಉಷೆಯ ಗೆಳತಿ
ಬಾ ಭಾವಿ ಸಂಗಾತಿ

ಬಾರೆ ಮುತ್ತಿನ ಚಂಡೆ
ಬಾಇಲ್ಲಿ ಮಲ್ಲಿಗೆ ದಂಡೆ
ಬಾ ಮದನನ ಬಿಲ್ಲೆ
ಬಾ ಸೌಂದರ್ಯದ ಮಾಟಗಾತಿ

ಬಾರೆ ಭಾವಿ ಸಂಗಾತಿ

ಬಾಯೆನ್ನ ಕಲ್ಯಾಣಿ
ಬಾ ಬೇಗೆನ್ನ ರಾಣಿ
ಬಂದು ತೋರೆ ಕರುಣೆ
ಕಾದಿರುವೆ ಬಾಯೆನ್ನ ರತಿ
ಬಾ ಬಾರೆ ಭಾವಿ ಸಂಗಾತಿ

ಮೂಡಣದ ತುದಿಯಲ್ಲಿ
ರವಿರಷ್ಮಿಯ ಬೆಳಕಲ್ಲಿ
ಮೂಡುತಿಹುದು ನಿನ್ನಬಿಂಬವು
ಚಡಪಡಿಕೆಯೆನ್ನ ಪರಿಸ್ತಿತಿ
ಬಾಬಾರೆ ಭಾವಿ ಸಂಗಾತಿ

ಶಶಿಯ ಕಳೆಯಲಿ ರವಿಯ ಹೊಳಪಂತೆ
ಪಳಪಳನೆ ಹೊಳೆಯುವಂತಿಹುದು ನಿನ್ನ ವದನವು
ಚಿಟಪಟ ಬೀಳುವ ಇಬ್ಬನಿಯ ಸ್ಪರ್ಷವು
ನಿನ್ನ ನೆನಪ ಮೆಲಕು ಮಾಡುತಿಹುದು
ಕಾಯುತಿರುವೆ ಬಾಬಾರೆ ಭಾವಿ ಸಂಗಾತಿ

Saturday 24 December 2011

ನನಗೆ ತೋಚಿದ್ದು ಇಲ್ಲಿ ಗೀಚಿದ್ದು

ಇಬ್ಬನಿಯ ತಬ್ಬಿದ ಮಂಜನು
ಸೀಳಿ ಧರೆಗಿಳಿದ ಬೆಳ್ಳಿಕಿರಣ
ಅರಳಿನಿಂತ ಹೂವನು ತಬ್ಪಿ
ಇಬ್ಬನಿಯಿತ್ತ ಮುತ್ತು ಪ್ರೇಮ

ಬಿಸಿಲಿಗೆ ಬೆಂದು ಕೆಂಪಾಗಿ
ಧರೆಗೆ ತಂಪೆರೆವ ವರ್ಷಧಾರೆಯ
ಹನಿ ನೀರಿಂದೊಮ್ಮಿದ
ಮಣ್ಣಿನ ಘಮ ಪ್ರೇಮ

ಹಸುವಿನ ಕೇಚ್ಚಲಲ್ಲಿ ಕರು ಹಾಲುಣ್ಣುತಿರಲು
ಆಗಾಗ ತಿರುಗಿ ನೋಡುವ
ಆಕಳ ಕಣ್ಣಲ್ಲಿಚಿಮ್ಮುವ
ಮಮತೆ ವಾತ್ಸಲ್ಯ ಪ್ರೇಮ

ಪೂರ್ತಿ ಮಾತುಬಾರದ ಹಸುಳೆ
ಕಿಲಕಿಲನೆ ನಗುತಲಿ
ತನ್ನ ತೊದಲ ಮಾತಲಿ ಕರೆವ
ಅಮ್ಮನೆಂಬ ಕೂಗುಪ್ರೇಮ

ಅಕ್ಷಿ ನೋಟಗಳು ಬೆರೆತಾಗ
ತುಟಿಯಂಚಲಿ ಮಿಂಚಿ
ವಿನಿಮಯವಾದ ಒಲವಿನ
ಮುಗುಳ್ನಗೆ ಪ್ರೇಮ

ಪದಪುಂಜಗಳಿಗೆ ನಿಲುಕದೆ
ಎದೆಯಲ್ಲಿಯೇ ಉಳಿದ
ನೂರಾರು ಮಾತುಗಳು
ಬೆಚ್ಚನೆ ಬಾವದ ಲಹರಿಯುಪ್ರೇಮ

ಗೆಳತಿಯ ಬಯಸಿದ ನನ್ನಯ
ಮನದ ಪ್ರೇಮವನ್ನಾಕೆಯು
ತಿರಸ್ಕರಿಸೆ ಮೂಡಿದವು ನನ್ನಲಿ
ಈ ಕೆಳಗಿನ ಸಾಲುಗಳು

ನಿನ್ನಂದಕಿಲ್ಲ ನನ್ನಲೇನೂ ಮಾತು
ಪರಿಪರಿಯಾದ ನಿನ್ನಮಾತಿಗೆ ಸೋತು
ಸಪ್ನದಿ ಕಾಣೊ ನಿನ್ನೀಪರಿಯ ರೂಪ
ಆದರೆನ್ನ ಮನವೇನು ಮಾಡಿತ್ತೆ ಪಾಪ

ಬೆಟ್ಟ ಸುತ್ತಿ ಗಿರಿಯ ಬಳಸಿ
ಬಂದೆ ನಾನಿನ್ನ ಸೇರಲು
ಸೆರಲಿಲ್ಲ ಮನಸು ನಿನ್ನಲಿ
ಮರೆತೆಯ ನನ್ನ ಪ್ರೀತಿಯ

ಹಗಲನಾರಿಸಿ ಇರುಳು ನೆನೆಸಿ
ನಿನ್ನ ಹೃದಯ ನಾ ಮುಟ್ಟಲು
ಬಿಸಿಲಿನಲ್ಲಿ ಬಿರುಗಾಳಿ ಸಿಕ್ಕಿ
ಸಿಗದಾಯಿತಲ್ಲೆ ಪ್ರೀತಿ ಮೆಟ್ಟಿಲು

ಅಂದವೊಂದಿರುವ ಕಲ್ಲುಮನದ ಅಂಗನೆಯು
ನೀನೆಂದು ನನಗಿಂದು ಅರ್ಥವಾಯಿತು
ಒಲ್ಲದಾಕೆ ಮನಸಿನ ಕುರೂಪವೆ
ಮರೆಯಲವಳನು ದಾರಿಯಾಯಿತು

Thursday 22 December 2011

ಹೊಸ ಪ್ರಯತ್ನ

ಮಾತೆಂಬುದು ಎರಡುಅಕ್ಷರ
ಮೌನವೆಂಬ ಎರಡುಅಕ್ಷರ
ದೀಪವೆಂಬ ಎರಡುಅಕ್ಷರ
ಗಾಳಿಯೆಂಬ ಎರಡುಅಕ್ಷರ
ಪ್ರೀತಿಯೆಂಬ ಎರಡುಅಕ್ಷರ

ಪ್ರೇಮದಿಂದ ಮಾತನಾಡಿದೆ
ವಿರಹದಿಂದ ಮೌನವಾಗಿಹೆ
ಪ್ರೇಮದೀಪ ನೀನುಬೆಳಗಿಹೆ
ಗಾಳಿಬಂದು ಅದಾರಿಹೋಯಿತೆ
ನಿನಗೆಇಂದು ಪ್ರೀತಿಸೋತಿತೆ

ಪಾಪವೆಂಬ ಎರಡುಅಕ್ಷರ
ತಾಪವೆಂಬ ಎರಡುಅಕ್ಷರ
ಜಪವೆಂಬುದು ಎರಡುಅಕ್ಷರ
ಕೋಪವಿದೂ ಎರಡುಅಕ್ಷರ
ರಂಪವಿದೂ ಎರಡುಅಕ್ಷರ

ಪಾಪವೇನು ಮಾಡಿದೆನೆಂದು
ಪ್ರೇಮದಿ ತಾಪವನೀಡಿದೆ
ಜಪವುನಿನ್ನದೆ ನೋಡೆ ಬಾಲೆ
ಕೋಪವನುನಿ ಬಿಟ್ಟುಬಾರೆಲೆ
ರಂಪವಮಾಡದೆ ನನ್ನಲ್ಲಿರೆ

ಆದಿಯಿದೂ ಎರಡುಅಕ್ಷರ
ಅಂತ್ಯವಿದೂ ಎರಡುಅಕ್ಷರ
ಆಸ್ತಿಎಂಬುದು ಎರಡಕ್ಷರ
ಅಸ್ತಿಯು ಕೂಡಎರಡಕ್ಷರ
ಬಾಳೆಂಬುದು ಎರಡುಅಕ್ಷರ

ನನ್ನಪ್ರೀತಿಗೆ ಆದಿನೀನೆ
ಮಾಡದಿರು ಪ್ರೀತಿಅಂತ್ಯನೀ
ಆಸ್ತಿಯು ನಿನ್ನಪ್ರೀತಿನನಗೆ
ಪ್ರೀತಿಯಸ್ತಿಬಿಡಲಿಚ್ಚೆಯೇನೆ ?
ಪ್ರೀತಿಯಿರದ ಬಾಳುಬಾಳೆ ?

ಶೂಲವೆಂಬ ಎರಡುಅಕ್ಷರ
ಚಿತ್ತವೆಂಬುದು ಎರಡಕ್ಷರ
ಸೋಲೆಂಬುದು ಎರಡುಅಕ್ಷರ
ನೀತಿಯೆಂಬುದು ಎರಡಕ್ಷರ
ಪಾಠವೆಂಬುದು ಎರಡಕ್ಷರ

ಶೂಲದಿ ಎದೆಗೆ ಚುಚ್ಚಿದೆಯಾ
ಚಿತ್ತದಿನೋವಿಟ್ಟು ಹೋದೆಯ
ಪ್ರೀತಿಗೆ ಸೋಲನು ಇಟ್ಟೆಯಾ
ಪ್ರೀತಿಯ ನೀತಿಯ ಮೀರಿದೆಯಾ
(ಪ್ರೀತಿ)ಮಾಯೆಯೆಂದು ಹೇಳಿಕೊಟ್ಟೆಯ

Wednesday 21 December 2011

ಸೊಲ್ಲ ನೀ ಕೇಳೆ

ನಿಲ್ಲು ನಿಲ್ಲೆಲೆ ಸಲ್ಪ
ಸೊಲ್ಲ ನಿ ಕೇಳೆ
ಇಲ್ಲಿ ನಿ ಬಂದು
ಬೆಲ್ಲದಂತ ಮಾತಾಡೆ
ನಲ್ಲ ನಾನಿನಗಾಗಿ
ಎಲ್ಲೆಲ್ಲಿ ಹುಡುಕಿದೆ
ಮೆಲ್ಲ ನಿ ಬಂದು
ಸೊಲ್ಲ ನಿ ಕೇಳೆ

ಭವ್ಯ ಪ್ರೆಮ ಮಂಟಪದಿ
ದಿವ್ಯ ಜ್ಯೋತಿ ನಿ
ಕಾವ್ಯ ಬರೆಸುವ ಕಾಮಿನಿ
ಸುಶ್ರಾವ್ಯ ಕಂಟದಿ
ಪ್ರಿಯಕರ ನನ್ನ ಕರೆಯೆ
ಹಿತಕರ ನುಡಿಯ ನೀನಾಡದಿರೆ
ಸಂಚಕಾರ ನನ್ನೀ ಹೃದಯಕೆ
ಕೊಂಚ ಪ್ರೀತಿಯ ಸೊಲ್ಲ ನಿ ಕೇಳೆ

ರವಿ ನಿನ್ನ ಕಂಡನಂತೆ
ಕವಿಯಾಗಿ ಹೋದನಂತೆ
ಸವಿಯಾದ ನಿನ್ನ ಮಾತಕೇಳಿದಂದೆ
ಸೆರೆಯಾಗಿ ಹೋದನಂತೆ
ಉರಿಯೇಕೊ ಎದೆಯಲೆಂದು
ಮರಿಪ್ರೇಮ ಅಳುತಿದೆಯಿಂದು
ಅರಿತು ನೀನಿಲ್ಲಿ ಬಂದು
ಸಲ್ಪ ಸೊಲ್ಲ ನೀ ಕೇಳೇ

Sunday 18 December 2011

ಕೇಳೆ ಪಂಚಮಿ

ಕೇಳೆ ಚಲುವೆ ಪಂಚಮಿ

ಉಸಿರೇ ಉಸಿರೆ ಪ್ರಾಣದಾ ಮೂಲವೆ
ಉಸಿರೆ ಉಸಿರೆ ಜೀವದಾ ಜಾಲವೆ
ನಂಗೆ ನೀಕೊಟ್ಟ ಹೃದಯವೇ
ನನ್ನುಸಿರಿನಾ ಮೂಲವೆ

ಕೇಳೆ ಚಲುವೆ ಪಂಚಮಿ

ಪ್ರೀತಿಯ ಸುಂದರ ಪ್ರಪಂಚದಲಿ
ಕನಸಿನ ಮೆಲಕಿನ ಸಾಗರದೊಳು
ಪ್ರಿಯೆನಿನ್ನ ನೆನಪಿನ ನಾವೆಯಲಿ
ನಾನೊಂದು ಸ್ವಪ್ನ ಕಂಡಿರಲು

ಕೇಳೆ ಚಲುವೆ ಪಂಚಮಿ

ನನ್ನದೊಂದು ಮೂಕ ಮನಸು
ಇಂದಿಲ್ಲಿ ಮೌನಗಿತೆ ಹಾಡಿದೆ
ಏಕೊ ಏನೋ ಮಾತಿನಲ್ಲಿ
ನನ್ನ ನೀನಂದು ಕಾಡಿದೆ

ಕೇಳೆ ಚಲುವೆ ಪಂಚಮಿ

ನನ್ನ ಪ್ರೀತಿ ನಿನಗಿರಲಿ
ನಿನ್ನ ನೋವು ನನಗಿರಲಿ
ನೀನಾಡೋ ಒಂದುಪ್ರೀತಿ ಮಾತಲಿ
ನನ್ನ ಬಾಳಲಿ ಕನಸೊಂದು ಚಿಗುರಲಿ

ಕೇಳೆ ಚಲುವೆ ಪಂಚಮಿ

ನನ್ನ ಎದೆಯ ಸುಡುತಿಹುದು
ನಿನ್ನ ಪ್ರೇಮದಾ ತಾಪ
ತಿಳಿಯೆಯಾ ನೀನು ದುಗುಡವಾ
ಪೇಳೇ ನನ್ನಬಾಳ ನಂದಾದೀಪ


ಕೇಳೆ ಚಲುವೆ ಪಂಚಮಿ

ಈ ಪ್ರೇಮ ಕವಿತೆಯಲಿ
ನಿನ್ನ ನೆನಪು ತುಂಬಿರಲಿ
ಪ್ರೇಮಕೆ ಅರಿ ಯಾರಿರಲಿ
ಬಂದು ಜೊತೆಸೇರೆ ಜಯ ಪ್ರೇಮಕಿರಲಿ

ಕೇಳೆ ಚಲುವೆ ಪಂಚಮಿ

Saturday 17 December 2011

ನನಗೆ ತೋಚಿದ ಸಾಲುಗಳು

ಎರಡು ಕಣ್ಣಿಗೂ
ನೂರಾರೂ ಕನಸಿಗೂ
ಉಸಿರಾ ನೀಡಲು ಓಮ್ಮೆ
ಒಲಿದು ನೀ ಬಾರೆಯಾ

ನನ್ನಾ ಆತ್ಮದಿ
ನಿನ್ನಾ ನೆನಪಿದೆ
ನೂರು ಆಸೆಯಾ
ನಾ ತುಂಬಿಕೊಂಡಿಹೆ

ಬಾಳಿನೊಳು ಬಾಬಾರೇ
ಪ್ರಣಯಾನುಭಾವ ಬೀರೆ
ಕವಿತೆಯೊಳು ಕವಿದ
ಆ ಬಾವವು ನೀನಾಗೆ

ನೆನಪಲ್ಲಿ ಮಳೆಬಿಲ್ಲ ಛಾಯೆ
ನಾನಿನ್ನು ನಿನಗಾಗಿ ಕಾಯೆ
ನನ್ನಲಿ ಪೂರ್ತಿ ನಿನ್ನ ಪ್ರೀತಿಯೇ
ಬಾಬಾರೆ ಓನನ್ನ ಪ್ರಿಯೆ

ನನ್ನ ಒಳಗೊಳಗೆ
ನಾನಾಗಿ ಇರುವವಳೆ
ಸುತ್ತೇಳು ಲೋಕದಲ್ಲಿ
ಎಲ್ಲೆಲು ನನ್ನವಳೆ

ಸುಡು ಬಿಸಿಲಲೂ ತಂಪಾಗಿಹುದಿ
ನಿನ್ನ ಪ್ರೀತಿ ಪನ್ನೀರ ಜೀವನದೀ
ಸಪ್ತ ಸಾಗರದಾಚೆ ನಿಂತು ಏಕೆ
ಮನ ಕಾಡುತಿರುವ ನಿನಗೇನು ಬೇಕೆ