Tuesday 11 September 2012

1. ಸಾವು ಅಕ್ರಾಳ ಅಂತಕನ ಆಸ್ಥಾನ ಕಂಡಿರಲು ಅಗಾಧ ಅಕ್ರಮ ನೆನಪಿಗೆ ಬಂದಿರಲು ಜೀವಕ್ಕೆ ರಿಪುವಾಗಿ ಯಮಬಂದು ನಿಂತಿರಲು ಧರ್ಮದೂತ ಅಟ್ಟಹಾಸದಿ ನಿಂತು ನಗುತಿರಲು ನೆನಪಿಸಿತದು ಸಾವನ್ನು ಪ್ರೀತಿ ಮನಸನು ಅಳಿಸುತ ಮನಸನು ಆಳುತ ಮನವನು ಸೆಳೆಯುತ ಬಾವನೆ ಕೊಲ್ಲುತ ಮರೆಯಲಾಟವನಾಡುತ ಮನದ ನೆಮ್ಮದಿ ಕೊಲ್ಲುತ ಇರುವುದು ಪ್ರೀತಿ ನಮ್ಮೊಡನಾಡುತ 2. ಮೈತ್ರಿ ಹಂದರದಿ ಪ್ರೀತಿ ಹಂಬಲ ಪ್ರೇಮದುಳಿವಿಗೆ ನೆನಪಿನ ಮುಚ್ಚಳ ಪ್ರೇಮ ತಲ್ಪಕೆ ನಂಬಿಕೆಯ ಪಂಜರ ಹೃದಯ ಜನಿತ ಪ್ರೀತಿಗೆ ಎದೆಯ ಗೂಡೆ ಆದಾರ 3. ಪಾಲಿಸು ಜಗದೊಡೆಯ ಹೇ ಮಂಜುನಾಥ ಬಕುತರ ಪಾಲಿಪ ನೀ ಸೌಖ್ಯಧಾತ.. ಆದಿ ನೀನೆ ಅಂತ್ಯ ನೀನೆ ಜೀವ ನೀನೆ ಜನುಮನೀನೆ ಜೀವಾ ಕೊಟ್ಟು ಕಣ್ಣಾಕಿತ್ತು ನಿನ್ನಾ ನೋಡೋ ಆಸೆಯಿತ್ತು ಎಲ್ಲಿ ಅಡಗಿಹೇ.. ಮಂಜುನಾಥ.. ಬದುಕಿನ ವೀಣೆಯ ತಂತಿಯು ನೀನೆ ನಾದದಿ ಹೊಮ್ಮುವ ಸ್ವರನಿನಾದ ನೀನೆ ಕುರುಡಾ ನಾನು ಗುರುವು ನೀನು ದೇವಾ ತೋರೋ ದಾರಿಯ ಮಂಜುನಾಥ..

No comments:

Post a Comment