Tuesday 31 January 2012

ದ್ವೀಪದಲ್ಲಿ ದೀಪಧರ ಭಾಗ 4

ಜೈ ಬಜರಂಗ ಭಲಿ ಜಯ ಗಣೇಶಾಯ ನಮಃ ಶಿವನೇ ಭಯಹರನೇ ಗಂಗಾಧರನೇ

ಏನಿಲ್ಲ ಶಾಕ್ ಆಗೋದೇನು ಬೇಡ ಭೂತದ ಕಥೆ ಅಲ್ವಾ ಅದಕ್ಕೆ ದೇವರ ನೆನಪುಮಾಡ್ಕೊಳೋಣ ಅಂತ ನೀವು ರೆಡಿ ನಾ ಕಥೆ ಓದೋಕೆ ಹ ಹ ಅರ್ಥ ಆಯ್ತು ಮುಂದುವರಿಸ್ತೀನಿ.

ಮೊಬೈಲ್ ಕಾಲ್ ಗಳಿಗೆ ದಿಕ್ಬಂದನ ಹಾಕೋಕಾಗಲ್ಲ ಅಂತ ಅದಕ್ಕೆ ಮೋಡರ್ನ ಭೂತಗಳು ಫೋನ್ ಮತ್ತು ಕಂಪ್ಯೂಟರ್ ನ ಬಳಸಿಕೊಳ್ತಾ ಇದೆ

ದಿಕ್ಬಂಧನ ಹಾಕಿದ ಮಂತ್ರವಾದಿ ಹಳೇ ಕಾಲದ ಕಿತ್ತೋಗಿರೊ ಯಮಃ ಗಾಡಿ ಡುರ್ ಗುರ್ ಅನ್ನೋತರ ಏನೇನೋ ಬಯ್ಯೋಕೆ ಶುರು ಮಾಡ್ದ ಬಯ್ಯೋಕೆ ಅಂದ್ರೆ ಮಂತ್ರ ಹೇಳೋಕೆ ಅಂತ ನಾನು ಪ್ರೀತಿಯಿಂದ ಇಟ್ಟ ಹೆಸರು ಈ ಪ್ರೀತಿ ಯಾರು ಅಂತಾ ಕೇಳ್ಬೇಡಿ ನಂಗೂ ಗೊತ್ತಿಲ್ಲ. ಮಂತ್ರ ಹೇಳ್ತಾಇದ್ದ ಮಂತ್ರವಾದಿ ಮೊಬೈಲ್ ನೋಡಿ ಕೊಡೋಕೆ ಹೇಳ್ದಾ ಅಷ್ಟರಲ್ಲಿ ಫೋನ್ ಬಂತು ಯಾಕೊ ಗೊತ್ತಿಲ್ಲ ಶ್ರೀ ಗೆ ಧೈರ್ಯ ಬಂದುಬಿಟ್ಟಿತ್ತು ಅದೇ ಉತ್ಸಾಹದಿಂದ ಫೋನ್ ರಿಸೀವ್ ಮಾಡ್ದ " HAI ಮಚ್ಚಾ ಹೌ ಆರ್ ಯು ಓ ಮಂತ್ರವಾದಿ ಕರೆಸಿದೀಯಾ ಯಾರ್ ಬಂದ್ರೂ ನಂಗೆ ನೋ ಪ್ರೊಬ್ಲೆಮ್ ನಾನು ಸೇಡು ತೀರಿಸಿಕೊಂಡೇ ಹೋಗೋದು ನನ್ನ ಕೆಲಸಕ್ಕೆ ಯಾವನ್ ಮೂಗು ತೋರೀಸಿದ್ರೂ ಕೆಲಸ ಆಗೇ ಆಗುತ್ತೆ ನೀನು ರೆಡಿಯಾಗು ಹ ಹೇಳೋಕೆ ಮರ್ತಿದ್ದೆ ಇನ್ನ 4 ದಿನ ನಿನ್ನ ಬರ್ತ್ ಡೆ ಇದ್ಯಲ್ಲಾ ಅದೇ ದಿನಾ ನಿನ್ನ ಸಾಯಿಸ್ತೀನಿ ಅದು ಹೇಗೆ ಬಚಾವಾಗ್ತೀಯೋ ನೋಡೆಬಿಡೋಣ I WILL KILL U ಹಹಹಹಹ" ಅಂತ ವಿಕಾರವಾಗಿ ನಗ್ತಾ ಫೋನ್ ಕಟ್ ಆಯ್ತು. ಸ್ವಲ್ಪ ಟೆನ್ಸ್ ಆದ್ರೂ ಸುದಾರಿಸ್ಕೊಂಡ ಶ್ರೀ ಮೊಬೈಲ್ ನ ಮಂತ್ರವಾದಿಗೆ ಕೊಟ್ಟ ಮಂತ್ರವಾದಿ ಮಂತ್ರಹೇಳ್ತಾ ಅದಕ್ಕೆ ಕುಂಕುಮ ಅರಿಶಿನ ಹಚ್ಚಿ ಮೇಕಪ್ ಮಾಡೋಕೆ ಶುರು ಮಾಡ್ದ..

ಆದರೆ ಆ ಮಂತ್ರವಾದಿಗೆ ಒಂದು ವಿಷ್ಯ ಗೊತ್ತಿರಲಿಲ್ಲ ಅನ್ಸುತ್ತೆ ಮೊಬೈಲ್ ಗೆ ಪೂಜೆ ಮಾಡೋ ಬದರು ಬ್ಯಾಟರಿ ಸಿಮ್ ತೆಗೆದು ಬಿಸಾಕಿದ್ರೆ ಸಾಕಾಗಿತ್ತು ಅಂತ ಹೋಗ್ಲಿ ಬಿಡಿ ನಮಗ್ಯಾಕೆ ಪೇಮೆಂಟ್ ಕೊಡೋದು ಶ್ರೀ ನ ತಂದೆ ನಾವಲ್ಲವಲ್ಲ. ಕುಂಕುಮ ಇಟ್ಟ ಫೋರ್ಸ್ ಅಂತ ಕಾಣುತ್ತೆ 2 ನಿಮಿಷಕ್ಕೆ 100 ಮೆಸೆಜ್ ಬಂತು ಒಂದು ಕ್ಷಣ ಮಂತ್ರವಾದಿ ಕೂಡ ಶಾಕ್ ಆದ ನಂತರ ಚೇತರಿಸಿಕೊಂಡು ಇದು ಸಾಮಾನ್ಯ ಭೂತ ಅಲ್ಲ ಅದು ಭಾರಿ ಫವರ್ ಪುಲ್ ಅಂತ ಹೇಳಿ ನಿಮ್ಮ ಮನೆಯ ಎಲ್ಲಾ ಬಾಗಿಲು ತೋರಿಸಿ ಅಂತ ಮನೆ ನೋಡೋಕೆ ಹೋದ ಅಲ್ಲಿ 1 ಬಾಗಿಲು ನೋಡಿ ಇದು ಇಲ್ಲಿ ಇರಬಾರದಿತ್ತು ಅಲ್ಲಿ ಇರಬೇಕಿತ್ತು ಅಂತ ಒಳ್ಳೆ ಮೇಸ್ತ್ರಿ ( ಸಣ್ಣ ಮನೆ ಕಟ್ಟೋ ಇಂಜಿನಿಯರ್ ) ತರ ಕುಯ್ಯೋಕೆ ಶುರು ಮಾಡಿದ.. ಹಾಗೇ ಮುಂದೆ ಹೋಗಿ ಮನೆಯ ಹೊರಗಡೆ ಎಂಟೂ ದಿಕ್ಕಿಗೆ ನಿಂಬೆ ಹಣ್ಣನ್ನ ಹೂತು ಹಾಕಿ ಮನೆ ಬಾಗಿಲುತಳಿಗಳಿಗೆ ಮೆಣಸಿನ ಕಾಯಿ ಕಟ್ಟಿದ ಮೋಸ್ಟಲಿ ದೆವ್ವಕ್ಕೆ ಖಾರ ಅಂದ್ರೆ ಭಯ ಇರುತ್ತೋ ಏನೊ.. ಹಾಗೇ ದೇವರ ಕೋಣೆಗೆ ಬಂದು ನಾನು ಇಲ್ಲಿ ಜಪ ಮಾಡ್ತಾ ಇರ್ತೀನಿ ಅಗತ್ಯ ಇದ್ರೆ ಕರೀರಿ ಅಂತ ಜಪ ಮಾಡ್ತಾ ಕೂತ..

ಇತ್ತ ಶ್ರೀ ಸ್ಟಾರ್ಟ ಮಾಡಿ ಸಮುದ್ರದಲ್ಲಿ ಬಿಟ್ಟಿದ್ದ ಬೊಟು ಅಂಡಮಾನ್ ಪೋಲೀಸರು ಹಿಂಬಾಲಿಸಿ ಪುಷ್ಕರಣಿ ತಲುಪಿದರು ಅಲ್ಲಿ ಸಿಕ್ಕ ಪ್ರದಿ ಯ ಪಾಸ್ ಪೋರ್ಟ ನೋಡಿ ಬೆಂಗಳೂರಿನ ಪೋಲೀಸರಿಗೆ ತನಿಕೆಯನ್ನ ವರ್ಗಾಯಿಸಿದರು ಆದರೆ ಪ್ರದಿ ಶವ ಅವರಿಗೆ ಸಿಗಲಿಲ್ಲ 24 ಹವಳಗಳು ಫೋಲೀಸರ ವಶವಾಯಿತು...

ವಶಪಡಿಸಿಕೊಂಡ ಹವಳಗಳನ್ನ ಪೋಲೀಸರೇ ಲಪಟಾಯಿಸಲು ಹೊಂಚುಹಾಕಿದ್ರು. ಆದರೆ ಈ ಭಾರಿ ಹವಳಗಳನ್ನ ಕಾಯುತ್ತಾ ಇರೋದು ಹಾವಲ್ಲ ಹಾವಿನ ಬದಲಾಗಿ ಹವಳ ಕಾಯ್ತಾ ಇರೋದು ನಮ್ಮ ಪ್ರದೀ...

ಇತ್ತ ಕನ್ನಡ ಸಿನಿಮಾದಲ್ಲಿ ಆವಿಶ್ಕಾರಿ ನಿರ್ದೇಶಕ ಎಂದು ಬಿರುದು ಪಡೆದಿದ್ದ ಕುಮಾರ್ ಪುಷ್ಕರಣಿಯಲ್ಲಿ ಶೂಟಿಂಗ್ ಮಾಡೋ ಪ್ಲೇನ್ ಹಾಕಿಕೊಂಡು ಅಲ್ಲಿಗೆ ಹೋದ ಆದರೆ ಅದು ಈ ಭಾರಿ ನಿರ್ಜನವಾಗಿರಲಿಲ್ಲ ಅಲ್ಲಿ ನಮ್ಮ ಪ್ರದಿ ಒಂದು ಚಿಂಪಾಜಿ ಜೊತೆ ಮರಕೋತಿ ಆಟ ಆಡ್ತಾ ಇದ್ದ ಅಂಡಮಾನ್ ಭಾಷೆ ಅಲ್ಪಸ್ವಲ್ಪ ಕಲಿತಿದ್ದ ಕುಮಾರ್ ದೀಪು ಬಳಿಹೊಗಿ ಏನೋ ಅಂದ ಅದು ಅವನಿಗೆ ಅರ್ಥವಾಗದೇ ಅಂದರೆ ಏನು ಅಂತ ಕೇಳಿದ ಕನ್ನಡ ಭಾಷೆನ ದೀಪು ಬಾಯಲಿ ಕೇಳಿದಾಗ ಕುಮಾರ್ ಗೆ ಮೈ ಎಲ್ಲ ಒಂದು ಕ್ಷಣ ರೋಮಾಂಚನ ಆಯಿತು ಸುದಾರಿಸಿಕೊಂಡು ವಿವರ ಕೇಳೋಕೆ ಶುರು ಮಾಡ್ದ ದೀಪು a to z plash back ಹೇಳ್ದ ಕುಮಾರ್ ಗೆ ವಿಷಯ ತಿಳಿದು ಕರ್ನಾಟಕ ಕ್ಕೆ ಕರಕೊಂಡು ಹೋಗೋದಾಗಿ ಹೇಳ್ದ 2 ದಿನ ಶೂಟಿಂಗ್ ಮುಗಿಸಿ ಅಲ್ಲಿಂದ ಹೊರಟರು...



ನಿಮಗೆ ಕಾಡುತ್ತಿರುವ ಕೆಲ ಅನುಮಾನಗಳು

1 ಫೋನ್ ಮಾಡಿ ಹೆದರಿಸಿದವರು ಯಾರು ?

2 ಪ್ರದಿ ಬದುಕಿದ್ದು ಹೇಗೆ ?

3 ಸಾಯೋ ಸ್ಥಿತಿಯಲ್ಲಿದ್ದ ಪ್ರದಿ ನ ಶ್ರೀ ಹಾಗೆ ಬಿಟ್ಟು ಬಂದಿದ್ದು ಏಕೆ ?

4 ಫೋನ್ ಮಾಡುತ್ತಿದ್ದ ಹುಡುಗಿ ಯಾರು ?


ಇತ್ಯಾದಿಗಳಿಗೆ ಉತ್ತರ ಮುಂದಿನ ಭಾಗದಲ್ಲಿ ಕಾಯುತ್ತಿರಿ....

No comments:

Post a Comment