ಭೂರಮೆಯ ರಮಿಸಲೆಂದು
ನೇಸರನು ಭಾನರಥವೇರಿ ಬಂದು
ಭುವಿಗೆ ತಲೆಭಾಗಿ ನಿಂದು
ಪ್ರೇಮ ಭಿಕ್ಷೆಯ ಕೋರಲು
ನಗುನಗುತಾ ಇಳೆ ಒಲ್ಲೆಯೆಂದಳು
ಮನನೊಂದ ದಿನಕರನು ಸೋದರನ ಕರೆದು
ನಡೆದ ವಿಷಯವನರುಹಿ ಅಳಲು
ಅಗ್ರಜನ ಸಂತೈಸಿ ಹೇಳಿದ ಚಂದಿರ
"ಪ್ರೀತಿ ಪ್ರೇಮವ ನಂಬದಿರು ಸೋದರ
ಅದು ಕಳೆದುಕೊಂಡಿದೆ ನೈಜ ಆಕಾರ"
ಇತ್ತ ಅತ್ತಿತ್ತ ನೋಡುತ್ತಿದ್ದ ಇಳೆಯು
ಶಶಿಯ ರೂಪರಾಶಿಯನು ಕಂಡಳು
ತಿಂಗಳಾಂದಕೆ ಮನಸೋತು ಕೂಗಿ ಕೇಳಿದಳು
"ನಿನ್ನ ಪ್ರೇಮವ ಬಯಸುತಿರುವೆನು ನಾ
ನಿನ್ನ ಉತ್ತರಕೆ ಉತ್ತರದಿ ಕಾದಿರುವೆನು ನಾ"
ಒಮ್ಮೆ ಚಂದಿರನತ್ತಿತ್ತ ನೋಡಲು
ರವಿಯ ಕಣ್ಣೀರಿಂದ ತುಂಬಿತ್ತು ಕಡಲು
ಪ್ರೀತಿ ಬೇಡವೆಂದಿತು ಮನದ ಒಡಲು
ಆದರೂ ಕೇಳದೆ ಸಿಡಿಯಿತು ಪ್ರೀತಿಯಾ ಸಿಡಿಲು
ಸೇರಬೇಕೆನಿಸಿತು ಧರೆಯಾ ಮಡಿಲು
ಉತ್ತರವ ತಿಳಿಸದೇ ಉಳಿದನು ಚಂದಿರ
ಸೋದರನ ಮೆಚ್ಚಿದನು ಧಿನಕರ
ಸ್ನೇಹಿತೆಯಾಗೆ ಉಳಿದಳು ವಸುಂಧರ
ತುಂಬುತಿದೆ ಇಂದಿಗೂ ಅವರ ಸ್ನೇಹ ಭಂಡಾರ
ಇದನ್ನ ಕಲ್ಪನೆಯೊಳು ಕಂಡ ನಾನು 'ಭಾಸ್ಕರ'
No comments:
Post a Comment