ಏಕೆ ಕಾಡುತಿರುವೆ ಚಲುವೆ
ಮಾಯವಾಗಿದೆ ನನ್ನಾ ಮನವೆ
ಅಂದು ಉರಿಬಿಸಿಲಲು ತಂಪನಿತ್ತ ಚಲುವೆ
ಯಾಕೆ ನನ್ನಮೇಲೆ ಮುನಿಯುತಿರುವೆ ||
ಕೋಟಿ ವರುಷದ ಫಲವೋ ನನಗೆ ನೀ ಸಿಕ್ಕಿದೆ
ಕಾಣೆನಾ ಏನು ಶಾಫವೋ ಮನವ ನೀ ಚುಚ್ಚಿದೆ
ಬಾಳದಾರಿಯಲಿಂದು ನೆನಪುಗಳು ಬರದಾಗಿದೆ
ನಿನ್ನ ಕಾಯುತಲಿ ನನ್ನ ಹೃದಯ ಬರಿದಾಗಿದೆ ||
ಏಕೋ ಏನನೂ ಕಾಣೆ ನಾನು
ಮನದಿ ದುಗುಡವು ಏನೇನೋ
ಕಣ್ಣ ರೆಪ್ಪೆಯಂತೆ ಕಾಯುವೆ ನಿನ್ನನು
ತೆರೆದು ಬಾ ಮನದ ಪುಟ ಪುಟವನು ||
ನಿಮ್ಮ ಕಾವ್ಯದ ಸಾಲುಗಳಲ್ಲಿ ಭಾವಗಳು ಆಗಾಧವಾಗಿದೆ. ಅದನ್ನು ಇನ್ನಷ್ಟು ಬೆಳೆಸಬೇಕು.ಪದಗಳಲ್ಲಿ ಕಟ್ಟಿ ಹಾಕಲು ಭಾವಗಳಿಗೆ ಸ್ವಲ್ಪ ಕಾಲಾವಕಾಶ ಕೊಡಿ. ಉತ್ತಮ ಕವಿತೆ ಸೃಷ್ಠಿಯಾಗುವ ಲಕ್ಷಣ ದಟ್ಟವಾಗಿದೆ.ಶುಭವಾಗಲಿ.
ReplyDelete